ಅಣ್ಣಿಗೇರಿಯಲ್ಲಿ ಜಾಕ್ ಹಚ್ಚಿ ಲಾರಿ ಟೈರ್ ಎಗರಿಸಿದ ಚೋರರು…!

ಅಣ್ಣಿಗೇರಿ: ಪಟ್ಟಣದ ದೇಶಪಾಂಡೆನಗರದ ಸಮೀಪದ ಗದಗ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿನ ಸೊಪ್ಪಿಯವರ ಮನೆ ಮುಂದಿನ ಸರ್ವೀಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಸಿಮೆಂಟ್ ತುಂಬಿದ್ದ ಲಾರಿಯ ಹಿಂದಿನ ಟೈರ್ ಗಳನ್ನ ದೋಚಿಕೊಂಡು ಪರಾರಿಯಾಗಿದ್ದಾರೆ.

ತೋರಣಗಲ್ ವಿಘ್ನೇಶ್ವರ ಟ್ರಾನ್ಸಪೋರ್ಟ ಕಂಪನಿಯ ಲಾರಿಯ ಚಾಲಕ ಮಂಜುನಾಥ ಎಂಬುವವರೇ ಲಾರಿಯನ್ನ ನಿಲ್ಲಿಸಿದಾಗ ಘಟನೆ ನಡೆದಿದೆ. ಕದ್ದ ಟೈರ್ ಬೆಲೆ 45 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.
ಕುಂದಗೋಳಕ್ಕೆ ಅನ್ ಲೋಡ್ ಮಾಡಲು ಬೆಳಿಗ್ಗೆ ಹೋಗಬೇಕಾದ ಸಮಯದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಅಪೋಲೊ ಕಂಪನಿಯ ಟೈರಗಳನ್ನ ಕದಿಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಣ್ಣಿಗೇರಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಲಾಗಿದೆ.