ಕಲಘಟಗಿ ಬ್ಲಾಕ್ ಕಾಂಗ್ರೆಸ್ ಹೊಸ ಅಧ್ಯಕ್ಷ ಸ್ಥಾನಕ್ಕೆ ತಡೆ ನೀಡಿದ ಕೆಪಿಸಿಸಿ…! ಸಂತೋಷ ಲಾಡ್ ಹೈ ತೋ ಸಬ್ ಮುಮ್ಮಕಿನ್ ಹೈ…!
1 min readಬೆಂಗಳೂರು: ಮಾಜಿ ಸಚಿವ ಸಂತೋಷ ಲಾಡ ಅವರ ಸಮ್ಮುಖದಲ್ಲಿ ತೀರ್ಮಾನವಾಗಿದ್ದ ಕಲಘಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡಿದ್ದ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ಮತ್ತದೇ ಕೆಪಿಸಿಸಿ ಆದೇಶ ಹೊರಡಿಸುವ ಮೂಲಕ, ಸಂತೋಷ ಲಾಡ ಅಂದ್ರೇ, ಏನು ಎಂಬುದನ್ನ ತೋರಿಸಿಕೊಟ್ಟಿದ್ದಾರೆ.
ಗುರುನಾಥ ಶಿವಪ್ಪ ದಾನೇನವರ ನೇಮಕಾತಿಯನ್ನ ತಡೆ ಹಿಡಿದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ ಆದೇಶ ಹೊರಡಿಸಿದ್ದು, ಪ್ರತಿಯನ್ನ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ಅವರಿಗೆ ರವಾನಿಸಿದ್ದಾರೆ.
ಹಾಲಿ ಅಧ್ಯಕ್ಷ ಮಂಜುನಾಥ ಮುರಳ್ಳಿ ಅವರನ್ನ ತೆಗೆದು, ನಾಗರಾಜ ಛಬ್ಬಿ ಬೆಂಬಲಿಗ ಗುರುನಾಥ ಅವರನ್ನ ನೇಮಕ ಮಾಡಲಾಗಿತ್ತು. ಆದ ವಾರದಿಂದ ಸತ್ಕಾರಗಳು ನಡೆಯುತ್ತಿದ್ದವು. ಈಗ ನೇಮಕಾತಿಗೆ ತಡೆ ಮಾಡಿದ್ದರಿಂದ ನಾಗರಾಜ ಛಬ್ಬಿ ಬಣಕ್ಕೆ ತೀವ್ರ ಹಿನ್ನೆಡೆಯಾಗಿದೆ.
ಕಲಘಟಗಿ ಕಾಂಗ್ರೆಸ್ ನಲ್ಲಿ ಸಂತೋಷ ಲಾಡ ಅವರನ್ನ ಹಣಿಯಬೇಕೆಂದು ಹಗಲುಗನಸು ಕಂಡವರಿಗೆ ಲಾಡ್, ಪ್ರತ್ಯುತ್ತರ ನೀಡಿದ್ದಾರೆ. ಕ್ಷೇತ್ರದ ಜನರ ಬಯಕೆಯನ್ನೂ ಈ ಮೂಲಕ ಈಡೇರಿಸಿದ್ದಾರೆಂದು ಹೇಳಲಾಗುತ್ತಿದೆ.