Posts Slider

Karnataka Voice

Latest Kannada News

ಧಾರವಾಡದ ‘ಪ್ರತಿಷ್ಠಿತ’ ವಿದ್ಯಾಸಂಸ್ಥೆಯಲ್ಲಿ ‘ಹಂಗೆ-ಹಿಂಗೆ’- ಪೊಲೀಸ್ ಠಾಣೆಯಲ್ಲಿ ನಡೆಯುತ್ತಿದೆ ತನಿಖೆ…!

1 min read
Spread the love

ಧಾರವಾಡ: ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯೊಂದರಲ್ಲಿ ಪ್ರಮುಖರೋರ್ವರು ತಮಗೆ ಕಿರುಕುಳ ನೀಡುತ್ತಿದ್ದಾರೆಂದು ಮಹಿಳಾ ಉಪನ್ಯಾಸಕಿಯೋರ್ವರು, ನಗರದ ಠಾಣೆಯೊಂದರಲ್ಲಿ ದೂರು ನೀಡಿದ್ದು, ಈ ಸಂಬಂಧ ಪೊಲೀಸರು ತನಿಖೆಯನ್ನ ಆರಂಭಿಸಿದ್ದಾರೆ.

ಸಾವಿರಾರೂ ವಿದ್ಯಾರ್ಥಿಗಳಿಗೆ ಜೀವನದ ಮೆಟ್ಟಿಲು ಹತ್ತಿಸಿದ ವಿದ್ಯಾಸಂಸ್ಥೆಯಲ್ಲಿ ಮಹಿಳಾ ಉಪನ್ಯಾಸಕಿ ತೀವ್ರವಾದ ಮಾನಸಿಕ ಕಿರುಕುಳವನ್ನ ಅನುಭವಿಸುತ್ತಿದ್ದಾರಂತೆ. ತಮ್ಮನ್ನ ಬೇರೆ ಥರದಲ್ಲಿ ಬಳಕೆ ಮಾಡುವ ಪ್ರಯತ್ನ ನಡೆದಿದೆ ಎಂದು ದೂರಿನಲ್ಲಿ ಮಹಿಳಾ ಉಪನ್ಯಾಸಕಿ ಹೇಳಿಕೊಂಡಿದ್ದಾರೆ.

ಈ ಬಗ್ಗೆ ದೂರು ಪಡೆದಿರುವ ಪೊಲೀಸರು ಪ್ರತಿಷ್ಠಿತ ಕಾಲೇಜಿನ ಗೌರವಕ್ಕೆ ಧಕ್ಕೆಯಾಗದಂತೆ ತನಿಖೆಯನ್ನ ಆರಂಭಿಸಿದ್ದಾರೆಂದು ಗೊತ್ತಾಗಿದೆ. ಉಪನ್ಯಾಸಕಿ ದೂರಿನಲ್ಲಿ ಹೆಸರಿಸಿರುವ ವ್ಯಕ್ತಿಯನ್ನೂ ಕರೆದು ಪೊಲೀಸರು ವಿಚಾರಣೆಯನ್ನ ನಡೆಸಿದ್ದಾರೆಂದು ಇನ್ನೂ ಖಚಿತವಾಗಿಲ್ಲ.

ಈ ವಿಷಯ ಪ್ರಮುಖ ವಿದ್ಯಾ ಸಂಸ್ಥೆಗಳಲ್ಲಿ ಸಂಚಲನ ಮೂಡಿಸಿದ್ದು, ಮಹಿಳಾ ಉಪನ್ಯಾಸಕಿಗೆ ನ್ಯಾಯ ಸಿಗಲಿ ಎಂದು ಬಹುತೇಕರು ಮನವಿ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.


Spread the love

Leave a Reply

Your email address will not be published. Required fields are marked *