ಮಂಟೂರು ಮೀನುಗಾರನಿಗೆ ತಕ್ಕ ಪಾಠ ಕಲಿಸಿದ ಪಿಡಿಓ ಅಶ್ವಿನಿ ರಾಠೋಡ…!

ಹುಬ್ಬಳ್ಳಿ: ಜಿಲ್ಲಾಡಳಿತದ ಆದೇಶವನ್ನ ಉಲ್ಲಂಘನೆ ಮಾಡಿ ಮೀನು ಮಾರಾಟ ಮಾಡಿ, ಜನಜಂಗುಳಿಯನ್ನ ಸೇರಿಸಿದ್ದ ವ್ಯಾಪಾರಸ್ಥನಿಗೆ ತಕ್ಕ ಪಾಠವನ್ನ ಮಂಟೂರ ಗ್ರಾಮ ಪಂಚಾಯತಿ ಪಿಡಿಓ ಅಶ್ವಿನಿ ರಾಠೋಡ ಕಲಿಸಿದ್ದಾರೆ.
ನಿನ್ನೆಯ ದೃಶ್ಯಗಳು
ಮಂಟೂರ ಗ್ರಾಮದ ಹೊರವಲಯದಲ್ಲಿನ ಕೆರೆಯಲ್ಲಿ ಮೀನುಗಳನ್ನ ಹಿಡಿದು ಅಲ್ಲಿಯೇ ಮಾರಾಟ ಮಾಡಿದ್ದ ಮಾಹಿತಿ ಕರ್ನಾಟಕವಾಯ್ಸ್.ಕಾಂ ಮೂಲಕ ಹೊರ ಬಿದ್ದ ಕೆಲವೇ ಸಮಯದಲ್ಲಿ ಪಿಡಿಓ ಅಶ್ವಿನಿಯವರು, ಮೀನು ಮಾರಾಟಗಾರ ನಿಂಗಪ್ಪ ತೀರ್ಲಾಪುರನಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಾರಿಗೆ ದಂಡವನ್ನ ಹಾಕಲಾಗಿದ್ದು, ಆದೇಶವನ್ನ ಉಲ್ಲಂಘನೆ ಮಾಡಿದವರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ತಕ್ಷಣವೇ ದಿಟ್ಟತನದಿಂದ ಕ್ರಮವನ್ನ ಜರುಗಿಸಿ, ಪಿಡಿಓ ರಾಠೋಡ ಮಾದರಿಯಾಗಿದ್ದಾರೆ.