Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯಲ್ಲಿ ಸೋಮವಾರದಿಂದ ಮತ್ತೊಂದಿಷ್ಟು ರಿಲೀಫ್…!

Spread the love

ಧಾರವಾಡ: ಜೂನ್ 7ರ ವರೆಗೆ ಲಾಕ್ ಡೌನ್ ಕಟ್ಟುನಿಟ್ಟಾಗಿ ನಿಭಾಯಿಸಲಾಗುವುದೆಂದು ಹೇಳಿದ್ದ ಜಿಲ್ಲಾಧಿಕಾರಿಗಳು ಧಾರವಾಡ ಜಿಲ್ಲೆಯಲ್ಲಿ ಜೂನ್ 7ರಿಂದ ಮತ್ತೊಂದಿಷ್ಟು ರಿಲೀಫ್ ಘೋಷಣೆ ಮಾಡಿದ್ದಾರೆ.

ಜೂನ್ 7ರಿಂದ ಜೂನ್ 14 ರ ವರೆಗೆ ಆಹಾರ, ದಿನಸಿ, ಕಿರಾಣಿ, ಹಣ್ಣು, ತರಕಾರಿ, ಡೈರಿ, ಹಾಲಿನ ಬೂತ, ಮಾಂಸ, ಮೀನು, ಪಶು ಆಹಾರದ ಅಂಗಡಿಗಳು ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಅವಕಾಶವನ್ನ ನೀಡಲಾಗಿದೆ.

ನ್ಯಾಯ ಬೆಲೆ ಅಂಗಡಿಗಳು ಬೆಳಿಗ್ಗೆ 6 ಗಂಟೆಯಿಂದ 12 ಗಂಟೆಯವರೆಗೆ ತೆರೆಯಲು ಅವಕಾಶವನ್ನ ನೀಡಲಾಗಿದೆ. ಮದ್ಯದ ಅಂಗಡಿಗಳಿಗೂ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಪಾರ್ಸಲ್ ಕೊಡಲು ಅವಕಾಶವನ್ನ ಕಲ್ಪಿಸಲಾಗಿದೆ.

ಹೊಟೇಲ್ ಗಳಲ್ಲಿ ಪಾರ್ಸಲ್ ಕೊಡಲು ಬೆಳಗಿನ ಹತ್ತು ಗಂಟೆಯವರೆಗೆ ಅವಕಾಶ ನೀಡಲಾಗಿದ್ದು, ಹೋಂ ಡಿಲೆವರಿ ರಾತ್ರಿ 8 ಗಂಟೆಯವರೆಗೆ ಮಾಡಲು ಅವಕಾಶವನ್ನ ನೀಡಲಾಗಿದೆ.


Spread the love

Leave a Reply

Your email address will not be published. Required fields are marked *