Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ನಡೆದದ್ದು ಒಂದಲ್ಲಾ, ಎರಡು ದರೋಡೆ …!

Spread the love

ಹುಬ್ಬಳ್ಳಿ: ನಗರದ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ರಿಂಗ್ ರೋಡಲ್ಲಿ ಎರಡು ಟಾಟಾ ಏಸ್ ಗಳ ಚಾಲಕರ ದರೋಡೆಯನ್ನ ಮಾಡಿಕೊಂಡು, ಇಬ್ಬರು ಬೈಕ್ ಸವಾರರು ಪರಾರಿಯಾದ ಘಟನೆ ನಡೆದಿದೆ.

ಬಳ್ಳಾರಿ ಮೂಲದ ಟಾಟಾ ಏಸ್ ತಡೆದು ದರೋಡೆ ಮಾಡಲಾಗಿದ್ದು, ಚಾಲಕ ಕೃಷ್ಣಾನನ್ನ ತಡೆದು ಹಿಂದೆ ಸೌಂಡ್ ಬರುತ್ತಿದೆ ಎಂದು ನಿಲ್ಲಿಸಿದ್ದಾರೆ. ನಿಲ್ಲಿಸಿದ ತಕ್ಷಣವೇ ಆತನ ಮೆಣಸಿನಕಾಯಿಯ ಪಟ್ಟಿ ಹಣವಿದ್ದ ಕಾರಣ, ಆತನ ಬಳಿಯಿದ್ದ 33 ಸಾವಿರ ರೂಪಾಯಿಯನ್ನ ದೋಚಿಕೊಂಡು ಪರಾರಿಯಾಗಿದ್ದಾರೆ.

ಇದಕ್ಕೂ ಪೂರ್ವದಲ್ಲಿ ಮೆಣಸಿನಕಾಯಿ ಸಾಗಾಟ ಮಾಡುತ್ತಿದ್ದ ಮತ್ತೊಂದು ವಾಹನ ಚಾಲಕ ಫಾರೂಕ ಎಂಬಾತನನ್ನ ತಡೆದು ಆತನಿಂದಲೂ ನಾಲ್ಕು ಸಾವಿರ ರೂಪಾಯಿಯನ್ನ ದೋಚಿಕೊಂಡು ಪರಾರಿಯಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಬೆಂಡಿಗೇರಿ ಠಾಣೆಯ ಪೊಲೀಸರು, ತಡವಾಗಿ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆಯನ್ನ ನಡೆಸಿ, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *