Karnataka Voice

Latest Kannada News

ಬಾಲಾಜಿ ಆಸ್ಪತ್ರೆಯ ಕೋವಿಡ್ ವಾರ್ಡ್ ಲ್ಲಿ “ಕಿತಾಪತಿ” ಮಾಡಿದ ‘ಕಿರಾತಕ’ ಕೋವಿಡ್ ವಾರ್ಡ ಪಾಲು…!

ಹುಬ್ಬಳ್ಳಿ: ಪ್ರತಿಷ್ಟಿತ ಆಸ್ಪತ್ರೆಯಲ್ಲಿ ಮಹಿಳಾ ರೋಗಿಯ ಮೇಲೆ ಲೈಂಗಿಕ ಕಿರುಕುಳ ನಡೆಸಿ ಪಾರಾಗಿದ್ದ ವಿಕೃತ ಕಾಮಿಯನ್ನ ಹೆಡಮುರಿ ಕಟ್ಟುವಲ್ಲಿ ವಿದ್ಯಾನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೇ 19ರಂದು ಆಂಧ್ರ ಮೂಲದ ಮಹಿಳೆಯೊಬ್ಬರು ಅನಾರೋಗ್ಯದಿಂದ ಹುಬ್ಬಳ್ಳಿಯ ಖ್ಯಾತ ವೈದ್ಯ ಡಾ. ಕ್ರಾಂತಿಕಿರಣ  ಒಡೆತನದ ಶ್ರೀ ಬಾಲಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲಿನ ಸಿಟಿ ಸ್ಕ್ಯಾನ್ ಕೊಠಡಿಗೆ ವಾರ್ಡ್ ಬಾಯ್ ಕರೆದುಕೊಂಡು ಹೊಗಿದ್ದ ಸಮಯಕ್ಕೆ ಕೊಠಡಿಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮಹಿಳೆಯೋಂದಿಗೆ ಅನುಚಿತ ವರ್ತನೆ ನಡೆಸಿದ್ದ. ಕೃತ್ಯ ಬಯಲಿಗೆ ಬರುತ್ತಿದ್ದ ಹಾಗೇ ಆರೋಪಿ ಅಶೋಕ ಆಸ್ಪತ್ರೆಯಿಂದ ಕಾಲ್ಕಿತ್ತಿದ್ದ.

ಪ್ರಕರಣದ ಜಾಡು ಹಿಡಿದ ವಿದ್ಯಾನಗರದ ಪೊಲೀಸ್ ಇನ್ಸಪೆಕ್ಟರ್ ಮಹಾಂತೇಶ ಹೊಳಿ ಅವರು, ಘಟನೆ ನಡೆದ ನಾಲ್ಕು ದಿನಗಳಲ್ಲೇ ಅಣ್ಣಿಗೇರಿ ಮೂಲದ ಅಶೋಕ ಹಲಗಿ ಎಂಬಾತನನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯ ಮುಖದ ಮೇಲೆ ಗಂಭೀರ ಸ್ವರೂಪದ ಗಾಯದ ಗುರುತುಗಳು ಪತ್ತೆಯಾಗಿವೆ. ಈ ಕುರಿತು ವಿಚಾರಿಸಿದಾಗ ಕಳೆದ ಎರಡು ದಿನಗಳ ಹಿಂದೆ ಬೈಕ್ ಮೇಲಿಂದ ಬಿದ್ದಿದ್ದಾನೆಂದು ಹೇಳಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಲು ಮುಂದಾಗದ ಆಸ್ಪತ್ರೆ ಸಿಬ್ಬಂದಿ ಆಸ್ಪತ್ರೆಗೂ ಈತನಿಗೂ ಸಂಬಂಧ ಇಲ್ಲವೇನೋ ಎನ್ನುವಂತೆ ವರ್ತಿಸುತ್ತಿದ್ದಾರೆ.  ಆದರೆ, ಖ್ಯಾತ ನರರೋಗ ತಜ್ಞ ಸಮಾಜ ಪರ ಕಾಳಜಿ ಹೊಂದಿರುವ ಡಾ. ಕ್ರಾಂತಿ ಕಿರಣ್   ಕಳೆದ ಹತ್ತು ವರ್ಷಗಳಿಂದ ಶ್ರೀ ಬಾಲಾಜಿ ಆಸ್ಪತ್ರೆಯಲ್ಲಿ ಇಂತಹ ನಡೆದಿರಲಿಲ್ಲ.

Leave a Reply

Your email address will not be published. Required fields are marked *