ಗಂಡ-ಹೆಂಡತಿ ಮತ್ತೂ ಅವನು: ತಾಳಿಗಟ್ಟಿದವ ಅಂಚಟಗೇರಿಯಲ್ಲಿ ಆತ್ಮಹತ್ಯೆ….!

ಹುಬ್ಬಳ್ಳಿ: ಕಳೆದ 23 ವರ್ಷದ ಹಿಂದೆ ಮದುವೆಯಾಗಿ ಎರಡು ಮಕ್ಕಳನ್ನ ಹೊಂದಿರುವ ಪತ್ನಿ, ತನ್ನ ಜೊತೆಗೆ ಇಲ್ಲದೇ ಬೇರೆಯವನ ಜೊತೆಯಿದ್ದಾಳೆಂದು ಬೇಸರಿಸಿಕೊಂಡು ವ್ಯಕ್ತಿಯೋರ್ವ ಮನೆಯಲ್ಲಿಯೇ ಕಬ್ಬಿಣದ ಜಂತಿಗೆ ನೇಣು ಹಾಕಿಕೊಂಡ ಘಟನೆ ತಾಲೂಕಿನ ಅಂಚಟಗೇರಿ ಗ್ರಾಮದಲ್ಲಿ ನಡೆದಿದೆ.

ಅಂಚಟಗೇರಿ ಗ್ರಾಮದ ಬೂದಪ್ಪ ಕೋರಿ ಎಂಬ 44 ವಯಸ್ಸಿನ ವ್ಯಕ್ತಿಯೇ ತನ್ನ ಮಡದಿ ಪಾರ್ವತಿ ಬೇರೆಯವರ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಡೆತ್ ನೋಟ್ ಬರೆದಿಟ್ಟು ಸಾವಿಗೀಡಾಗಿದ್ದಾನೆ.

ಕಳೆದ ಎರಡು ವರ್ಷದಿಂದ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನ ಮಡದಿ, ‘ನಿನಗಿಂತ ಛೂಲೋದಾವ್ ಸಿಕ್ಕಾನ್’ ಎನ್ನುತ್ತಲೇ ನನ್ನ ದೂರವಿಡುತ್ತಿದ್ದಳೆಂದು ಪತ್ರದಲ್ಲಿ ಬರೆದಿದ್ದಾರೆ.
ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣವನ್ನ ದಾಖಲು ಮಾಡಿಕೊಂಡು, ಮುಂದಿನ ಕ್ರಮವನ್ನ ಜರುಗಿಸಿದ್ದಾರೆ.