Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ “ಸ್ಮಾರ್ಟ್ ಸಿಟಿ ವರ್ಕ್” ಹೆಂಗಾಗಿದೆ ನೋಡಿ.. ರಸ್ತೆಯಲ್ಲಿ ಹೋದ್ರೇ ಬದುಕಿ ಬಂದ್ರೇ ಅದೇ ದೊಡ್ದು…!

Spread the love

ಹುಬ್ಬಳ್ಳಿ: ಅವಳಿನಗರವನ್ನ ಸ್ಮಾರ್ಟ್ ಸಿಟಿ ಮಾಡಲು ಹೊರಟವರು ಅದ್ಯಾವ ರೀತಿಯಲ್ಲಿ ಕೆಲಸ ಮಾಡಿ ಪರಾರಿಯಾಗಿದ್ದಾರೆ ನೀವೇ ನೋಡಿ. ಲಕ್ಷಾಂತರ ರೂಪಾಯಿ ಸುರಿದ ಮಾಡಿದ ರಸ್ತೆಯಲ್ಲಿ ಟ್ರ್ಯಾಕ್ಟರ್ ಸಿಲುಕಿ ಬೈಕ್ ನಜ್ಜುಗುಜ್ಜಾದ ಘಟನೆ ವೀರಾಪುರ ಓಣಿಯ ಬಳಿಯಿರುವ ಸಿದ್ಧನಪೇಟದಲ್ಲಿ ನಡೆದಿದೆ.

ಕಲ್ಲು ಹಾಗೂ ಕಬ್ಬಿಣವನ್ನ ಹೇರಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರವೊಂದು ರಸ್ತೆಯ ಪಕ್ಕದಲ್ಲಿಯೇ ಸಿಲುಕಿದೆ. ಈ ಸಮಯದಲ್ಲಿ ಮನೆ ಮುಂದಿದ್ದ ಬೈಕ್  ಕೂಡಾ ಜಖಂಗೊಂಡಿದೆ. ಇದರಿಂದ ರೋಸಿ ಹೋದ ಬೈಕ್ ಮಾಲೀಕ, ಟ್ರ್ಯಾಕ್ಟರನಾತನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದೇ ಸಮಯದಲ್ಲಿ ಪಾಲಿಕೆಯ ಮಾಜಿ ಸದಸ್ಯರೊಬ್ಬರು ಬಂದು, ಬೈಕ್ ರಿಪೇರಿಯನ್ನ ಮಾಡಿ ಕೊಡಿಸುವುದಾಗಿ ಹೇಳಿ, ಪ್ರಕರಣವನ್ನ ಮುಚ್ಚಿ ಹಾಕುವ ಯತ್ನವನ್ನ ಮಾಡಿದ್ದಾರೆಂದು ಗೊತ್ತಾಗಿದೆ.

ಕೊರೋನಾ ಸಮಯದಲ್ಲಿಯೂ ಹಣವನ್ನ ಪೀಕುವ ದಾರಿಯನ್ನ ಹುಡುಕುವ ಕೆಲವರು, ದಾರಿಯಲ್ಲೂ ಹೆಣ ಕೆಡುವುದಕ್ಕೆ ಮುಂದಾಗಿರುವುದು ಮಾತ್ರ ನಾಚಿಕಗೇಡಿನ ಸಂಗತಿಯಾಗಿದೆ.


Spread the love

Leave a Reply

Your email address will not be published. Required fields are marked *