ಕಲಾವಿದರಾದ ಧಾರವಾಡ ಎಸಿಪಿ ಜೆ.ಅನುಷಾ…!

ಧಾರವಾಡ: ಕೊರೋನಾ ಜಾಗೃತಿ ಮೂಡಿಸಲು ಧಾರವಾಡ ವಿಭಾಗದ ಸಹಾಯಕ ಪೊಲೀಸ್ ಕಮೀಷನರೊಬ್ಬರು ಕೆಲಕಾಲ ಕಲಾವಿದರಾಗಿ ನಡೆದಿದ್ದು, ಜನರಿಗೆ ತಿಳುವಳಿಕೆ ನೀಡುವ ಉದ್ದೇಶ ಇದರಲ್ಲಿಡಗಿದೆ.
ಧಾರವಾಡ ವಿಭಾಗದ ಎಸಿಪಿ ಜೆ.ಅನುಷಾ ಅವರು ನಗರದ ಪ್ರಮುಖ ಸ್ಥಳದಲ್ಲಿ ಕೊರೋನಾ ಸೋಂಕಿನ ಬಗ್ಗೆ ಜಿಲ್ಲಾಡಳಿತ ಬಿಡಿಸುತ್ತಿರುವ ಚಿತ್ರವನ್ನ, ತಾವೇ ಮಾಡಿ ಎಲ್ಲರ ಗಮನ ಸೆಳೆದರು.
ಮಾನವೀಯ ಕಾಳಜಿ ಹೊಂದಿದ ಮಹಿಳಾ ಅಧಿಕಾರಿಯಂದೇ ಖ್ಯಾತಿ ಪಡೆದಿರುವ ಎಸಿಪಿಯವರು, ಕೊರೋನಾ ವೈರಸ್ ನ ಚಿತ್ರಕ್ಕೆ ಬಿಳಿ ಬಣ್ಣವನ್ನ ಕೊಟ್ಟರು.
ನಗರದ ಬೀದಿಗಳಲ್ಲಿ ಕೊರೋನಾ ಜಾಗೃತಿ ಮೂಡಿಸಲು ಜಿಲ್ಲಾಡಳಿಯ ಮುಂದಾಗಿದ್ದು, ಆ ಭಾಗವಾಗಿ ಕೆಲವು ಪ್ರದೇಶಗಳಲ್ಲಿ ಚಿತ್ರಗಳನ್ನ ಬಿಡಿಸಲಾಗುತ್ತಿದೆ.