Posts Slider

Karnataka Voice

Latest Kannada News

ಕರ್ನಾಟಕ ಸರಕಾರದ ಸೇವೆಯಲ್ಲಿ ವಾಹನಕ್ಕೆ: ಪಾಠ ಕಲಿಸಿದ ಹುಬ್ಬಳ್ಳಿ ಪೊಲೀಸರು…!

Spread the love

ಹುಬ್ಬಳ್ಳಿ: ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಹಲವೆಡೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆಯನ್ನ ಮಾಡಿದ್ದು, ಖಾಸಗಿ ವಾಹನಗಳಿಗೆ ಪೊಲೀಸರು ಸರಿಯಾದ ಪಾಠವನ್ನ ಹೇಳಿಕೊಡುತ್ತಿದ್ದಾರೆ.

ಗದಗ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಾಹನಕ್ಕೆ ಕರ್ನಾಟಕ ಸರಕಾರದ ಸೇವೆಯಲ್ಲಿ ಎಂಬ ಬೋರ್ಡನ್ನ ಹಾಕಿದ್ದನ್ನ, ಪರಿಶೀಲನೆ ನಡೆಸಿದ ಪೊಲೀಸರು, ನಾಮಫಲಕವನ್ನ ತೆಗೆದರು.

ಸರಕಾರದ ಆದೇಶದ ಪ್ರಕಾರ ಖಾಸಗಿ ವಾಹನಗಳಿಗೆ ಹಸಿರು ಬಣ್ಣದಲ್ಲಿ ನಾಮಫಲಕವನ್ನ ಹಾಕುವ ಹಾಗಿಲ್ಲವೆಂದು ಗೊತ್ತಿದ್ದರೂ, ಲಾಕ್ ಡೌನ್ ಸಮಯದಲ್ಲಿ ಇದನ್ನೇ ಬಂಡವಾಳವಾಗಿಸಿಕೊಳ್ಳಲು ಮುಂದಾಗಿದ್ದವರಿಗೆ ಪೊಲೀಸರು ಚೆನ್ನಾಗಿಯೇ ಪಾಠ ಕಲಿಸಿದರು.

ಬಂದೋಬಸ್ತನಲ್ಲಿದ್ದ ಪೊಲೀಸರು ತಾವೇ ಪಕ್ಕಡ್-ಪಾನಾ ತಂದು ನಾಮಫಲಕ ತೆಗೆದು, ಕಾರಿನವರಿಗೆ ಎಚ್ಚರಿಕೆ ನೀಡಿದ್ದು ವಿಶೇಷವಾಗಿತ್ತು.


Spread the love

Leave a Reply

Your email address will not be published. Required fields are marked *