49ವಯಸ್ಸಿನ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಕೋವಿಡ್ ನಿಂದ ಸಾವು…!

ಬಾಗಲಕೋಟೆ: ಕೊರೋನಾ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿರುವ ಬೆನ್ನಲ್ಲೇ ಶಿಕ್ಷಕ ಸಮೂಹದಲ್ಲಿ ಹಲವರು ರೋಗಕ್ಕೆ ಬಲಿಯಾಗುತ್ತಿದ್ದಾರೆ. ಇಂದು ಬೆಳಗಿನ ಜಾವ ಕೊರೋನಾದಿಂದಲೇ ಮತ್ತೊಬ್ಬ ಶಿಕ್ಷಕರು ಕೊನೆಯುಸಿರೆಳೆದ ಘಟನೆ ಕೆರಕಲಮಟ್ಟಿ ಗ್ರಾಮದಲ್ಲಿ ಸಂಭವಿಸಿದೆ.

ವೀರಾಪುರ ಪು.ಕೆ (ಸಾ.ಕೆರಕಲಮಟ್ಟಿ) ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ 49 ವಯಸ್ಸಿನ ಶಿಕ್ಷಕ ಕೆ.ವಿ.ಕಡಿವಾಲ ಅವರೇ ಕೊರೋನಾದಿಂದ ಹೊರ ಬರಲಾಗದೇ ಸಾವಿಗೀಡಾಗಿದ್ದಾರೆ. ಶಿಕ್ಷಕ ಕಡಿವಾಲ ಅವರ ನಿಧನದಿಂದ ಶಾಲೆ ಹಾಗೂ ಶಿಕ್ಷಣ ಇಲಾಖೆಗೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆ ಶಾಲಾ ಸಿಬ್ಬಂದಿ, SDMC ಹಾಗೂ ಮಕ್ಕಳಿಗೆ ಅಗಾಧ ನೋವುಂಟುಮಾಡಿದೆ. ಒಬ್ಬ ಉತ್ತಮ, ಪ್ರಾಮಾಣಿಕ ಹಾಗೂ ಕರ್ತವ್ಯದ ಬಗ್ಗೆ ಶ್ರದ್ಧೆ ಇರುವ ಶಿಕ್ಷಕರನ್ನು ಶಿಕ್ಷಣ ಇಲಾಖೆ ಕಳೆದುಕೊಂಡಿದೆ.
ಮೃತರ ಸಂಬಂಧಿಕರಿಗೆ ಅವರ ಅಗಲಿಕೆ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಶಿಕ್ಷಕರ ಸಂಘದ ಜಿಲ್ಲಾ ಘಟಕ ಹಾಗೂ ರಾಜ್ಯ ಘಟಕ ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸಿವೆ. ಕದಾಂಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಶ್ರೀಶೈಲ ತೆಗ್ಗಿ ಪ್ರಾರ್ಥಿಸಿದ್ದು, ಶಿಕ್ಷಕ ಕಡಿವಾಲ ಅವರ ಅಂತ್ಯಕ್ರಿಯೆ ರಾತ್ರಿಯೇ ಮುಗಿದಿದೆ ಎಂದು ಮಾಹಿತಿಯನ್ನ ನೀಡಿದ್ದಾರೆ.