ಒಂದೇ ದಿನ ಒಂದೇ ತಾಲೂಕು- ಮೂವರು ಶಿಕ್ಷಕರು ಕೊರೋನಾಗೆ ಬಲಿ…!

ತುಮಕೂರು: ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಒಂದೇ ದಿನ ಸರ್ಕಾರಿ ಶಾಲೆಯ ಮೂವರು ಶಿಕ್ಷಕರು ಕೊರೋನಾ ಸೋಂಕಿಗೆ ಬಲಿಯಾಗಿರುವ ಘಟನೆ ತುಮಕೂರಿನ ಕುಣಿಗಲ್ ತಾಲೂಕಿನಲ್ಲಿ ನಡೆದಿದೆ.

ಕುಣಿಗಲ್ ತಾಲೂಕಿನ ಉಜ್ಜಯನಿ ಪ್ರೌಢ ಶಾಲೆಯ ಶಿಕ್ಷಕ ಶಿವರಾಮೇಗೌಡ, ಮಲ್ಲಿಪಾಳ್ಯ ಪ್ರೌಢ ಶಾಲೆಯ ಪರಮೇಶ್ವರ್ ಆಚಾರ್ ಹಾಗೂ ತುರುಗೂರು ಪ್ರಾಥಮಿಕ ಶಾಲಾ ಶಿಕ್ಷಕ ಕೃಷ್ಣಪ್ಪ ಕೊರೋನ ಸೋಂಕಿನಿಂದ ಸಾವನ್ನಪ್ಪಿದ್ದಾರೆಂದು ಗೊತ್ತಾಗಿದೆ.
ಈನಡುವೆತುಮಕೂರುಜಿಲ್ಲೆಯಲ್ಲಿಕೊರೋನಾಸೋಂಕುವ್ಯಾಪಕವಾಗಿಹರಡುತ್ತಿದ್ದು, ಅತಿಹೆಚ್ಚುಸೋಂಕಿತರುಇರುವ 18 ಬಡಾವಣೆಗಳನ್ನುಕೋವಿಡ್ಹಾಟ್ಸ್ಪಾಟ್ಎಂದುಗುರುತಿಸಲಾಗಿದೆ.
ಶಿಕ್ಷಕ ವಲಯದಲ್ಲಿ ಈ ಪ್ರಕರಣದಿಂದ ಮತ್ತಷ್ಟು ಆತಂಕ ಮನೆ ಮಾಡಿದ್ದು, ಯಾವುದೇ ಕಾರಣಕ್ಕೆ ಭಯ ಬೀಳದೇ ರೋಗದ ಗುಣಲಕ್ಷಣಗಳು ಕಂಡರೇ ತಕ್ಷಣವೇ ಚಿಕಿತ್ಸೆ ಪಡೆಯುವಂತೆ ಹಿರಿಯ ಅಧಿಕಾರಿಗಳು ಕೇಳಿಕೊಂಡಿದ್ದಾರೆ.