ಕೊರೋನಾಗೆ ಪ್ರಾಥಮಿಕ ಶಾಲಾ ಶಿಕ್ಷಕಿ ಬಲಿ…!

ಕಲಬುರಗಿ: ಸರಕಾರದ ನಿಯಮಗಳು ಯಾರು ಯಾರು ಬಲಿ ತೆಗೆದುಕೊಳ್ಳುತ್ತದೋ ಆ ಸಚಿವರಿಗೆ ಗೊತ್ತು. ಶಾಲೆಗೆ ಮಕ್ಕಳು ಬರದೇ ಇದ್ದರೂ, ಶಾಲೆಗೆ ಹಾಜರಿ ಹಾಕಬೇಕೆಂಬ ನಿಯಮದಿಂದಲೇ ಕೊರೋನಾ ಅಂಟಿಸಿಕೊಂಡು ಶಿಕ್ಷಕಿಯೋರ್ವರು ಸಾವಿಗೀಡಾದ ಘಟನೆ ನಡೆದಿದೆ.

ಕೋವಿಡ್ ನಲ್ಲಿ ಹತ್ತನೇ ಹೊರತುಪಡಿಸಿ ಸರಕಾರಿ ಶಾಲೆಗಳು ಬಂದ್ ಇದ್ದರೂ ಶಾಲೆಗೆ ಹೋಗಬೇಕೆಂಬ ಶಿಕ್ಷಣ ಇಲಾಖೆಯ ನಿಯಮವೇ ಶಿಕ್ಷಕಿಯೊಬ್ಬರು ಬಲಿಯಾಗಿದ್ದಾರೆ.
ಕಲಬುರಗಿ ಅಫಜಲಪುರ ತಾಲೂಕಿನ ಹಸರಗುಂಡಿಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ರೇಣುಕಾ ಮೃತಪಟ್ಟಿದ್ದಾರೆ. ಪ್ರತಿದಿನವೂ ಶಾಲೆಗೆ ಹಾಜರಾಗುತ್ತಿದ್ದರಿಂದ ಶಿಕ್ಷಕಿಗೆ ಕೊರೋನಾಗೆ ಬಂದಿತ್ತು.
ತೀವ್ರವಾಗಿ ಅನಾರೋಗ್ಯಗೊಂಡ ಶಿಕ್ಷಕಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದು, ಶಿಕ್ಷಕ ವಲಯ ಘಟನೆಯಿಂದ ಘಾಸಿಗೊಂಡಿದೆ.