ಮುಲ್ಲಾ ದಾಬಾ ಬಳಿ ದುರ್ಘಟನೆ- ರೋಜಾ “ಶಹರಿ”ಗೆ ಹೋದ ಇಬ್ಬರ ದುರ್ಮರಣ.. ಇನ್ನಿಬ್ಬರ ಸ್ಥಿತಿ ಗಂಭೀರ…!
1 min readಧಾರವಾಡ: ಗೆಳೆಯರೊಂದಿಗೆ ರೋಜಾ ಶಹರಿಗಾಗಿ ಹೋಗಿ ಮರಳಿ ಬರುತ್ತಿದ್ದಾಗ ಕಾರೊಂದು ಪಲ್ಟಿಯಾದ ಪರಿಣಾಮ, ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಸಂಭವಿಸಿದೆ.
ಧಾರವಾಡದ ಮಾಜಖಾನ ಪಠಾಣ, ಪೊಲೀಸ್ ಅಧಿಕಾರಿಯ ಮಗ ಮುಜಬೀಲ್ ಅಧೋನಿ ಘಟನೆಯಲ್ಲಿ ಸಾವಿಗೀಡಾದ ದುರ್ದೈವಿಗಳಾಗಿದ್ದಾರೆ. ಗಾಯಗೊಂಡ ತನ್ವೀರ ರಿಯಾಜ್ ಸೌದಾಗರ, ಸೂಫಿಯಾನ ಮುನ್ನಾ ಶೇಖರನ್ನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಹುಬ್ಬಳ್ಳಿಯಿಂದ ಬಂದ ಗೆಳೆಯರೊಂದಿಗೆ ರಾತ್ರಿ ಕಳೆದಿದ್ದ ನಾಲ್ವರು, ಬೆಳಗಿನ ಜಾವ ರೋಜಾ (ಉಪವಾಸ) ಆರಂಭಿಸಲು ಶಹರಿಗೆ ಹೋಗಿ ಮರಳಿ ಬರುತ್ತಿದ್ದಾಗ, ಕಾರು ಪಲ್ಟಿಯಾಗಿದೆ. ವೇಗವಾಗಿ ಕಾರು ಚಲಾಯಿಸುತ್ತಿದ್ದ ಸಮಯದಲ್ಲಿ ನಿಯಂತ್ರಣ ತಪ್ಪಿದ್ದರಿಂದ, ಮೂರ್ನಾಲ್ಕು ಬಾರಿ, ವಾಹನ ಪಲ್ಟಿಯಾಗಿದೆ ಎಂದು ಹೇಳಲಾಗಿದೆ.
ಮೃತಪಟ್ಟ ಮಾಜಖಾನ ಪಠಾಣ ಇಂಜಿನಿಯರ್ ವಿದ್ಯಾರ್ಥಿಯಾಗಿದ್ದು, ಇನ್ನುಳಿದ ಮೂವರು ಮೊದಲು ಒಂದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆಂದು ಗೊತ್ತಾಗಿದೆ.