Karnataka Voice

Latest Kannada News

“ತುಂಡು ದೇಹ” ಪ್ರಕರಣ- ಪೊಲೀಸ್ ಕಮೀಷನರ್ ಲಾಬುರಾಮ್ ಮಾತಾಡಿದ್ದಾರೆ…!

ಹುಬ್ಬಳ್ಳಿ: ನಗರದ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಂಸ್ಕಾರ ಶಾಲೆಯ ಸಮೀಪದಲ್ಲಿ ದೊರಕಿರುವ ದೇಹದ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮಾಡುತ್ತಿರುವುದಾಗಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಹೇಳಿದರು.

ಮಾತಾಡಿರೋ ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ..

ಕೈ ಹಾಗೂ ಕಾಲುಗಳಿಲ್ಲದ ಮತ್ತೂ ರುಂಡವೂ ಇಲ್ಲದ ದೇಹವೊಂದು ಸಿಕ್ಕಿದೆ. ಈ ಬಗ್ಗೆ ಸಾರ್ವಜನಿಕರು ಕೂಡಾ, ಸಹಾಯ ಮಾಡಬೇಕಿದೆ. ಕಳೆದ ಎರಡ್ಮೂರು ದಿನದಿಂದ ಮನೆಗೆ ಬರದೇ ಇರುವವರ ಬಗ್ಗೆ ಮಾಹಿತಿಯನ್ನ ನೀಡಿ, ತನಿಖೆಗೆ ಸಹಕಾರ ನೀಡುವಂತೆಯೂ ಪೊಲೀಸ್ ಕಮೀಷನರ್ ಕೋರಿದ್ದಾರೆ.

ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯ ದೇವರಗುಡಿಹಾಳ ಗ್ರಾಮದ ಹೊರವಲಯದಲ್ಲಿ ರುಂಡ ಸಿಕ್ಕಿದ್ದು, ಕಮೀಷನರೇಟ್ ವ್ಯಾಪ್ತಿಯಲ್ಲಿ ಕೈ ಕಾಲಿಲ್ಲದ ದೇಹ ಸಿಕ್ಕಿದೆ. ಇಂತಹ ಕ್ರೌರ್ಯ ನಡೆದಿದ್ದು, ಅವಳಿನಗರದ ಕ್ರೈಂ ಇತಿಹಾಸದಲ್ಲಿ ಇದೇ ಮೊದಲು.

Leave a Reply

Your email address will not be published. Required fields are marked *