ಧಾರವಾಡ ಕುಮಾರೇಶ್ವರ ನಗರದಲ್ಲಿ ಸರಣಿ ಅಪಘಾತ: ಮೂವರ ಸ್ಥಿತಿ ಗಂಭೀರ…!

ಧಾರವಾಡ: ಬೆಳಗಾವಿ ರಸ್ತೆಯ ಕುಮಾರೇಶ್ವರ ನಗರದ ಬಳಿ ನಿಯಂತ್ರಣ ತಪ್ಪಿದ ಕೀಯಾ ಕಾರೊಂದು ಮೂರು ಬೈಕುಗಳಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಘಟನೆಯಲ್ಲಿ ಮೂವರು ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.

ಬೆಳಗಾವಿಯಿಂದ ಬರುತ್ತಿದ್ದ ಕಾರು ಮಾಜಿ ಸಚಿವ ವಿನಯ ಕುಲಕರ್ಣಿಯವರ ಸಹೋದರ ವಿಜಯ ಕುಲಕರ್ಣಿಯವರೆದ್ದೆಂದು ಹೇಳಲಾಗಿದ್ದು, ಅಪಘಾತದಲ್ಲಿ ಹಲವು ಬೈಕುಗಳು ಜಖಂಗೊಂಡಿದ್ದು, ಮೂವರಿಗೆ ತೀವ್ರ ಥರದ ಗಾಯಗಳಾಗಿವೆ.

ವೇಗವಾಗಿ ಬರುತ್ತಿದ್ದ ಕೀಯಾ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದವರು ಯಾರೂ ಎಂಬುದು ಪತ್ತೆಯಾಗಿಲ್ಲ. ಕಾರಿನಲ್ಲಿ ವಿಜಯ ಕುಲಕರ್ಣಿಯವರೇ ಇದ್ದರಾ ಅಥವಾ ಇಲ್ಲವೋ ಎಂಬುದು ಕೂಡಾ ಗೊತ್ತಾಗಿಲ್ಲ. ರಸ್ತೆಯುದ್ದಕ್ಕೂ ಬಿದ್ದ ಮೂವರು ಗಾಯಾಳುಗಳನ್ನ ಪೊಲೀಸರು ಚಿಕಿತ್ಸೆಗಾಗಿ ಧಾರವಾಡದ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಕೆಎ-25 ಪಿ-007 ಕೀಯಾ ಕಾರಿಂದ ಅಪಘಾತ ಸಂಭವಿಸಿದೆ. ಕಾರು ಕೂಡಾ ಜಖಂಗೊಂಡಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.