Posts Slider

Karnataka Voice

Latest Kannada News

ಬಿಇಓ ಅಮಾನತು ರಾಜಕೀಯ: ಶಿಕ್ಷಣ ಸಂಯೋಜನಕನ ಕುತಂತ್ರ…!

Spread the love

ಉಡುಪಿ: ಹಳೆಯ ಕಡತಗಳ ನೆಪವೊಡ್ಡಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನ ಅಮಾನತು ಮಾಡಿರುವ ಪ್ರಕರಣದಲ್ಲಿ ರಾಜಕೀಯ ನುಸುಳಿದ್ದು, ಉತ್ತಮ ಆಡಳಿತ ನಡೆಸಿದ ಮಹಿಳಾ ಅಧಿಕಾರಿಗೆ ಬೆಂಬಲವಿಲ್ಲದಂತಾಗಿದೆ.

ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಂಜುಳ ಅವರನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ. ಆದರೆ, ಅಮಾನತ್ತಿಗೆ ನೀಡಿರುವ ಕಾರಣಗಳು ತುಂಬಾ ಬಾಲಿಶವಾಗಿವೆ ಎಂದು ಹೇಳಲಾಗಿದ್ದು, ಇದಕ್ಕೇಲ್ಲ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕನಾಗಿ ಕಾರ್ಯನಿರ್ವಹಿಸಿದ್ದ ಚಂದ್ರ ನಾಯ್ಕ ಎಂಬುವವರೇ ಕಾರಣವೆಂದು ಅಧಿಕಾರಿ ಹೇಳುವಂತಾಗಿದೆ.

ಚಂದ್ರ ನಾಯ್ಕ ಶಿಕ್ಷಕರ ಸಹಿಗಳನ್ನ ಪೋರ್ಜರಿ ಮಾಡಿ 35 ಸಾವಿರ ಹಣವನ್ನ ದುರ್ಭಳಕೆ ಮಾಡಿಕೊಂಡಿದ್ದರು. ಶಿಕ್ಷಕಿಯೊಬ್ಬರಿಗೆ ಅಸಹ್ಯಕರವಾದ ಪದಗಳನ್ನ ಬರೆದಿದ್ದರು. ಇದನ್ನೇಲ್ಲ ಪ್ರಶ್ನಿಸಿದ್ದಕ್ಕೆ ಮತ್ತೂ ಕ್ರಮ ಜರುಗಿಸಲು ಮುಂದಾದಾಗ, ಜಿಲ್ಲಾ ಪಂಚಾಯತಿ ಅಧ್ಯಕ್ಷರ ಬಳಿ ಹೋಗಿದ್ದ ಚಂದ್ರ ನಾಯ್ಕ. ಅಮಾನತ್ತಿಗೆ ಇವೇ ಕಾರಣಗಳು ಎಂದು ಹೇಳಲಾಗಿದೆ.

ಭ್ರಷ್ಟಚಾರ ಮತ್ತು ಸರಕಾರಿ ನೌಕರಿಯನ್ನ ಪಡೆಯಲು ಮುಂದಾಗಿದ್ದೇ ಬಿಇಓ ಮಂಜುಳಾ ಅವರಿಗೆ ಮುಳುವಾಗಿದ್ದು, ಅನಾಮಧೇಯ ಪತ್ರವೊಂದನ್ನ ಇಟ್ಟುಕೊಂಡು, ತನಿಖೆ ನಡೆಸಿದಂತೆ ಮಾಡಿ, ಅಮಾನತ್ತು ಮಾಡಲಾಗಿದೆ.

ದಕ್ಷ ಅಧಿಕಾರಿ ಮಂಜುಳಾ ಅವರು ಸಾಕಷ್ಟು ಶೈಕ್ಷಣಿಕ ಮೌಲ್ಯ ಹೆಚ್ಚುವ ಕೆಲಸವನ್ನ ಮಾಡಿದ್ದರು. ಆದರೆ, ವ್ಯವಸ್ಥೆಯಡಿಯಲ್ಲಿ ಸಿಕ್ಕು ಇಂದು ಅಮಾನತ್ತು ಆಗಿದ್ದಾರೆ. ಇವರ ಬೆಂಬಲಕ್ಕೆ ಜನಪರ, ಶಿಕ್ಷಣ ಪ್ರೇಮಿಗಳು ಬೆಂಬಲಕ್ಕೆ ನಿಲ್ಲಬೇಕಿದೆ ಅಲ್ಲವೇ..


Spread the love

Leave a Reply

Your email address will not be published. Required fields are marked *