Posts Slider

Karnataka Voice

Latest Kannada News

ಧಾರವಾಡ ಬೈಪಾಸ್ ಸಂಚಾರ ವೇಗಕ್ಕೆ ಬ್ರೇಕ್: ಜಿಲ್ಲಾಧಿಕಾರಿ ಆದೇಶ..!

Spread the love

ಧಾರವಾಡ: ತಾಲೂಕಿನ ಇಟಿಗಟ್ಟಿ ಬಳಿ ನಡೆದ ಭೀಕರ ದುರಂತದ ನಂತರ ಹಲವು ಕ್ರಮಗಳನ್ನ ಬೈಪಾಸ್ ಸಂಬಂಧ ತೆಗೆದುಕೊಳ್ಳಲಾಗುತ್ತಿದ್ದು, ಇಂದು ಧಾರವಾಡ ಜಿಲ್ಲಾಧಿಕಾರಿಗಳು ಬೈಪಾಸ್ ರಸ್ತೆಯಲ್ಲಿನ ವಾಹನಗಳ ವೇಗವನ್ನ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.

ಪೂನಾ ಬೆಂಗಳೂರು (ಹುಬ್ಬಳ್ಳಿ-ಧಾರವಾಡ) ರಾಷ್ಟ್ರೀಯ ಹೆದ್ದಾರಿ ನಾಲ್ಕರ 403.80 ನೇ ಕಿಲೋ ಮೀಟರ್ ನಿಂದ 433.200 ಕಿಲೋ ಮೀಟರ್ ವರೆಗಿನ ಸುಮಾರು 30.350 ಕಿಲೋ ಮೀಟರ್ ಪ್ರದೇಶದ ವ್ಯಾಪ್ತಿಯಲ್ಲಿ ಎಲ್ಲ ವರ್ಗದ ವಾಹನಗಳ ಸಂಚಾರದ ವೇಗವನ್ನ ತಾತ್ಕಾಲಿಕವಾಗಿ 40 ಕಿಲೋ ಮೀಟರ್ ಪ್ರತಿ ಗಂಟೆಗೆ ನಿಗಧಿಪಡಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ ಹೊರಡಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಬೈಪಾಸ್ ನಲ್ಲಿ ಅಪಘಾತಗಳು ಸಂಭವಿಸದಂತೆ ಹಲವು ಕ್ರಮಗಳನ್ನ ಈಗಾಗಲೇ ತೆಗೆದುಕೊಂಡಿದ್ದು, ಕೆಲವು ಅಡ್ಡರಸ್ತೆಗಳನ್ನ ಬಂದ್ ಮಾಡಲಾಗಿದೆ. ಇದೀಗ ವೇಗವನ್ನ ಮಿತಿಗೊಳಿಸಿದ್ದು, ಇದು ವಾಹನ ಸವಾರರ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದನ್ನ ಕಾದು ನೋಡಬೇಕಿದೆ.


Spread the love

Leave a Reply

Your email address will not be published. Required fields are marked *