ಧಾರವಾಡದಲ್ಲಿ ಹೆಂಡತಿಯ ವೇಲ್ ನಿಂದಲೇ ನೇಣಿಗೆ ಶರಣಾದ ಪತಿರಾಯ…!

ಧಾರವಾಡ: ಮನಸ್ಸಿಗೆ ಬೇಸರ ಮಾಡಿಕೊಂಡ ಪತಿಯೋರ್ವ ಹೆಂಡತಿಯ ವೇಲ್ ನಿಂದಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸವದತ್ತಿ ರಸ್ತೆಯ ಕಾಳೆ ಪ್ಲಾಟನಲ್ಲಿ ನಡೆದಿದೆ,

33 ವರ್ಷದ ಪ್ರಶಾಂತ ಪ್ರಕಾಶ ಪಟ್ಟೇದ ಎಂಬಾತನೇ ಸಾವಿಗೆ ಶರಣಾಗಿದ್ದಾನೆ. ಸತಿಯೊಂದಿಗೆ ಚೆನ್ನಾಗಿಯೇ ಇದ್ದ ಪ್ರಶಾಂತ, ಇಂದು ಮನೆಯಲ್ಲಿ ಮಡದಿ ಹೊರಗೆ ಹೋದ ನಂತರ ನೇಣು ಹಾಕಿಕೊಂಡಿದ್ದಾನೆ.
ಪಕ್ಕದ ಮನೆಯವರಿಗೆ ವಿಷಯ ಗೊತ್ತಾಗಿ, ತಕ್ಷಣವೇ ಆತನನ್ನ ಧಾರವಾಡದ ಸಿವಿಲ್ ಆಸ್ಪತ್ರೆಗೆ ತರಲಾಗಿತ್ತಾದರೂ, ಆಸ್ಪತ್ರೆಗೆ ಬರುವ ಮುನ್ನವೇ, ಪ್ರಶಾಂತನ ಪ್ರಾಣ ಹೋಗಿದೆ.
ಘಟನೆಗೆ ಸಂಬಂಧಿಸಿದಂತೆ ಧಾರವಾಡದ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮವನ್ನ ಜರುಗಿಸಿದ್ದಾರೆ.