ಯಾದವಾಡದ “ಮೃತ್ಯುಂಜಯ”-ರೇಲ್ವೆ ಹಳಿಯಲ್ಲಿ ಬಿದ್ದು ಆತ್ಮಹತ್ಯೆ…!

ಧಾರವಾಡ: ನಗರದ ಪವನ್ ಶಾಲೆಯ ಹಿಂಭಾಗದಲ್ಲಿ ವ್ಯಕ್ತಿಯೋರ್ವ ರೇಲ್ವೆ ಹಳಿಗೆ ತಲೆಯನ್ನ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದ್ದು, ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಧಾರವಾಡ ತಾಲೂಕಿನ ಯಾದವಾಡ ಗ್ರಾಮದ ಮೃತ್ಯುಂಜಯ ಶೇಖಪ್ಪಾ ತೊಟಗೇರ ಎಂಬ ವ್ಯಕ್ತಿಯೇ ರೇಲ್ವೆ ಹಳಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು, ದೇಹದ ತಲೆ ಭಾಗ ಸಂಪೂರ್ಣವಾಗಿ ಛಿದ್ರ ಛಿದ್ರವಾಗಿದೆ.
ಧಾರವಾಡದ ಬಾರಾಕೋಟ್ರಿ ಬಳಿಯಿರುವ ಪವನ್ ಶಾಲೆಯ ಹಿಂಭಾಗದಲ್ಲಿ ದುರ್ಘಟನೆ ನಡೆದಿದ್ದು, ರೇಲ್ವೆ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆಯನ್ನ ನಡೆಸಿದ್ದಾರೆ.

ಮೃತ್ಯುಂಜಯ ತೋಟಗೇರ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದು ಬಂದಿಲ್ಲ. ಗ್ರಾಮದಲ್ಲಿ ಎಲ್ಲರೊಂದಿಗೆ ಸಲುಗೆಯಿಂದ ಇರುತ್ತಿದ್ದನೆಂದು ಹೇಳಲಾಗಿದೆ.