ಪ್ರತಿಭಟನಾಕಾರರಿಗೆ “ಚೂಟಿದ್ದು” ಯಾರೂ…!

ಹುಬ್ಬಳ್ಳಿ: ಲಾಠಿ, ಬೂಟು, ಬಂದೂಕು ಇವೆಲ್ಲವುಗಳಿಂದ ಪೊಲೀಸರು ದರ್ಪ ಮೆರೆದಿರುವುದನ್ನು ಎಲ್ಲರೂ ಹಲವಾರು ಪ್ರತಿಭಟನೆಗಳ ಸಂಧರ್ಭಗಳಲ್ಲಿ ಕೇಳಿರಬಹುದು, ಆದರೆ ರೈತ ಮುಖಂಡರೋರ್ವರಿಗೆ ಪೋಲೀಸರು ಸೊಂಟಕ್ಕೆ ಚಿವುಟಿ ಅವರ ಹೋರಾಟದ ಕಿಚ್ಚನ್ನು ತಣ್ಣಗಾಗಿಸಲು ಪ್ರಯತ್ನಿಸಿರುವ ಘಟನೆಗೆ ಹುಬ್ಬಳ್ಳಿಯಲ್ಲಿಂದು ನಡೆದ ಭಾರತ ಬಂದ್ ಹೋರಾಟ ಸಾಕ್ಷಿಯಾಗಿದೆ.
ಹೌದು.. ಪೊಲೀಸರು ತಾಕತ್ತಿದ್ದರೆ, ಬಂಧಿಸಬೇಕು, ಗುಂಡು ಹೊಡೆಯಬೇಕು ಅದನ್ನು ಬಿಟ್ಟು ಸೊಂಟಕ್ಕೆ ಚಿವುಟುವುದು ಇದೆಂತಹ ಚಾಳಿ…ನಾನು ಇದಕ್ಕೆ ಸುಮ್ಮನೆ ಕೂರುವುದಿಲ್ಲ….ನನಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಸೊಂಟದಲ್ಲಿ ಉರಿಯುವಂತೆ ಚಿವುಟಿದ ಪೊಲೀಸರು ಯಾರು ಎಂಬುದನ್ನು ಪತ್ತೆ ಹಚ್ಚಲು ಸಿಸಿಟಿವಿ ಫುಟೇಜ್ ನೋಡಿ ಕ್ರಮ ಜರುಗಿಸುವಂತೆ ಪೋಲೀಸರಿಗೆ ಒತ್ತಾಯಿಸಿದ್ದೇನೆ ಎನ್ನುತ್ತಾರೆ ಸಿದ್ದು ತೇಜಿ… ಹೇಳಿದ್ದು ಕೇಳಿ ಇಲ್ಲಿದೆ ನೋಡಿ..