Posts Slider

Karnataka Voice

Latest Kannada News

ನಾಳೆ ಭಾರತ ಬಂದ್- ಹುಬ್ಬಳ್ಳಿ, ಧಾರವಾಡದಲ್ಲೂ ಬೆಂಬಲ…!

1 min read
Spread the love

ಹುಬ್ಬಳ್ಳಿ: ಕೃಷಿ ಸಂಘಟನೆಗಳು ನೀಡಿರುವ ಭಾರತ ಬಂದ್ ಗೆ ಹುಬ್ಬಳ್ಳಿ-ಧಾರವಾಡದಲ್ಲೂ ಬೆಂಬಲ ನೀಡುವುದಾಗಿ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಮಹಾನಗರ ಸಮಿತಿ ಹೇಳಿದೆ.

ಈ ಬಗ್ಗೆ ಕಾಂಗ್ರೆಸ್ ಮಾಡಿಕೊಂಡಿರುವ ಮನವಿ ಇಲ್ಲಿದೆ ನೋಡಿ..

ರೈತ ಹೋರಾಟಕ್ಕೆ ಬೆಂಬಲ

ಕರಾಳ ಕೃಷಿ ಕಾನೂನು ತಿದ್ದುಪಡಿ ವಿರೋಧಿಸಿ ನಾಳೆ ದಿನಾಂಕ: 26/3/2021 ರಂದು ರೈತ ಸಂಘಟನೆಗಳು ಕರೆ ನೀಡಿರುವ “ಭಾರತ ಬಂದ್” ಗೆ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ವತಿಯಿಂದ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತೇವೆ.

ಆದ ಕಾರಣ ನಾಳೆ (26/3/2021) ಬೆಳಿಗ್ಗೆ 10:00 ಗಂಟೆಗೆ ಚನ್ನಮ್ಮ ವೃತ್ತದಲ್ಲಿ ನಡೆಯುವ ರೈತರ ಹೋರಾಟದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಪಕ್ಷದ ಸಮಸ್ತ ಅಭಿಮಾನಿಗಳು ಭಾಗವಹಿಸಿ ಬೆಂಬಲ ಸೂಚಿಸಬೇಕೆಂದು ಕೋರುತ್ತೇವೆ.

ಅನಿಲಕುಮಾರ್ ಪಾಟೀಲ್

ಅಧ್ಯಕ್ಷರು

ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ

ಅಲ್ತಾಫ್ ಹುಸೇನ್ ಹಳ್ಳೂರ್

ಅಧ್ಯಕ್ಷರು

ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ


Spread the love

Leave a Reply

Your email address will not be published. Required fields are marked *

You may have missed