ಮೂರುಸಾವಿರ ಮಠದ ಉನ್ನತ ಸಮಿತಿ ರದ್ದು ಮಾಡಿ: ಅದು ಅಧಿಕೃತವೇ ಅಲ್ಲಾ…!
1 min readಹುಬ್ಬಳ್ಳಿ: ಪ್ರತಿಷ್ಠಿತ ಮೂರುಸಾವಿರ ಮಠದ ಆಸ್ತಿ ಉಳಿಸಲು ಹೋರಾಟವನ್ನ ರೂಪಿಸಲು ಪಕ್ಷಾತೀತವಾದ ಪ್ರಮುಖರು ನಿರ್ಧಾರ ಮಾಡಿದ್ದು, ಕಳೆದು ಹೋಗಿರುವ ಆಸ್ತಿಯನ್ನ ಉಳಿಸಿಕೊಳ್ಳಲು ಮುಂದಾಗುವ ನಿರ್ಧಾರವನ್ನ ಮಾಡಲಾಗಿದೆ.
ಹುಬ್ಬಳ್ಳಿಯಲ್ಲಿ ನಡೆದ ಪಕ್ಷಾತೀತ ಮುಖಂಡರ ಸಭೆಯಲ್ಲಿ ಮೂರುಸಾವಿರ ಮಠದ ಆಸ್ತಿ ಉಳಿವಿಗಾಗಿ ಹೋರಾಟ ಮಾಡುತ್ತೇವೆ. ನಾವೂ ಯಾರೇ ಹೇಳಿದ್ದಾರೆಂದು ಹೋರಾಟ ಮಾಡುತ್ತಿಲ್ಲ. ಸಮಾಜದ ಪರವಾಗಿ ಹೋರಾಟ ರೂಪಿಸಲಾಗುತ್ತಿದೆ ಎಂದು ಪ್ರಮುಖರು ಹೇಳಿದರು.
ಸಭೆಯ ನಂತರ ಮಾತನಾಡಿದ ವಿಧಾನಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಉನ್ನತ ಮಟ್ಟದ ಸಮಿತಿಯನ್ನ ರದ್ದು ಮಾಡಬೇಕು. ಅವರಿಂದ ಏನೂ ಆಗಿಲ್ಲ. ಅದು ಅಧಿಕೃತವೂ ಅಲ್ಲ. ಅವರಿಗೆ ಅವರದ್ದೆ ಆದ ಕೆಲಸಗಳಿವೆ ಎಂದು ಹೇಳಿದರು.
ಹೋರಾಟದ ರೂಪುರೇಷೆ ರಚನೆ ಮಾಡುತ್ತೇವೆ. ಆಸ್ತಿ ಉಳಿಸಲು ಬೇರೆ ಯಾರೇ ಸಾಥ್ ನೀಡಿದರೂ, ಅವರು ನಮ್ಮೊಂದಿಗೆ ಬರಲಿ ಎಂದು ಹೇಳಿದರು.