Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಉರುಳಿ ಬಿದ್ದ ಶಿವಾಜಿ ಪ್ರತಿಮೆ…!

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಉದ್ಯಾವನದಲ್ಲಿದ್ದ ಶಿವಾಜಿ ಮಹಾರಾಜ್ ಪ್ರತಿಮೆಯು ಉರುಳಿ ಬಿದ್ದಿದ್ದು, ಪ್ರತಿಮೆಯು ತುಂಡಾ ತುಂಡಾಗಿ ಬಿದ್ದಿದೆ. ಇದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಖಡ್ಗ ಹಿಡಿದು ಕುದುರೆ ಮೇಲೆ ಇರುವ ಶಿವಾಜಿ ಮಹಾರಾಜ್ ಪ್ರತಿಮೆಯು ಮುರಿದು ತುಂಡು ತುಂಡಾಗಿ ಬಿದ್ದಿದ್ದು, ಮುಖ ಹಾಗೂ ಕೈಗಳು ಕೂಡಾ ತುಂಡು ತುಂಡಾಗಿವೆ.

ಮಹಾನಗರ ಪಾಲಿಕೆಯಲ್ಲಿ ಪ್ರತಿಮೆ ಪ್ರತಿಷ್ಠಾಪನೆಯ ಜವಾಬ್ದಾರಿಯನ್ನ ಹೊತ್ತವರು ಕಳಫೆ ಮಟ್ಟದ ಪ್ರತಿಮೆಯನ್ನ ಮಾಡಿಸಿದ್ದಾರಾ ಎಂಬ ಅನುಮಾನ ಶುರುವಾಗಿದೆ. ಏಕೆಂದರೆ, ಪ್ರತಿಮೆಯ ಕುದುರೆಯ ಕಾಲಿನ ಭಾಗದಲ್ಲಿ ತುಂಡರಿಸಿದೆ.

ಪ್ರತಿಮೆ ಬೀಳುವುದಕ್ಕೆ ಕಾರಣವನ್ನೂ ತಿಳಿದುಕೊಳ್ಳುವ ಜೊತೆಗೆ ಪ್ರತಿಮೆ ಸ್ಥಾಪನೆ ಸಮಯದಲ್ಲಿ ಕಳಫೆಮಟ್ಟದಿಂದ ಹೀಗೆಲ್ಲ ನಡೆಯಿತಾ ಎಂಬುದನ್ನ ಅರಿತುಕೊಳ್ಳಬೇಕಿದೆ.

Leave a Reply

Your email address will not be published. Required fields are marked *