ತಮ್ಮದೇ ಪಕ್ಷದ ಶಾಸಕರಿಗೂ ಸರಿಯಾದ ಮಾಹಿತಿ ನೀಡದ ಬಿಜೆಪಿ ಸರಕಾರ…!

ಬೆಂಗಳೂರು: ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಮಾಹಿತಿಯನ್ನ ತಪ್ಪು ತಪ್ಪಾಗಿ ನೀಡಲಾಗುತ್ತಿದೆ ಎಂದು ವಿರೋಧ ಪಕ್ಷದವರು ದೂರುತ್ತಿಲ್ಲ. ಬದಲಿಗೆ ಅವರದ್ದೇ ಪಕ್ಷದ ಶಾಸಕರು ದೂರುವ ಸ್ಥಿತಿ ನಿರ್ಮಾಣವಾಗಿದೆ.
ಸರಕಾರ ಹೇಳಿದ ಸುಳ್ಳು ಯಾವುದು.. ಇಲ್ಲಿದೆ ನೋಡಿ ವೀಡಿಯೋ..
ಧಾರವಾಡ-71 ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರು ವಿಧಾನಸಭೆಯಲ್ಲಿ ಪ್ರಶ್ನೆ ಸಂಖ್ಯೆ 2087ನ್ನ ಕೇಳಲು ಮುಂದಾದಾಗ, ನಗರಾಭಿವೃದ್ಧಿ ಸಚಿವರ ಪರವಾಗಿ ಸಚಿವ ಶಿವರಾಂ ಹೆಬ್ಬಾರ ಉತ್ತರ ನೀಡಿದ್ರು. ಆಗ, ಸ್ವತಃ ಬಿಜೆಪಿಯ ಶಾಸಕ ಅಮೃತ ದೇಸಾಯಿ ಮಾತನಾಡಿ, ನೀವು ಕೊಟ್ಟಿರುವುದು ತಪ್ಪು ಮಾಹಿತಿ ಎಂದು ಹೇಳಿದರು.
ಎಪಿಎಂಸಿಯಲ್ಲಿ ಯಾವುದೇ ಮೂಲಭೂತ ಸೌಲಭ್ಯವಿಲ್ಲದೇ ಇದ್ದರೂ ಕರ ವಸೂಲಿ ಮಾಡಲಾಗುತ್ತಿದೆ. ಎಲ್ಲಿಯವರೆಗೆ ಮೂಲಭೂತ ಸೌಲಭ್ಯ ಕೊಡುವುದಿಲ್ಲವೋ ಅಲ್ಲಿಯವರೆಗೆ ಕರ ವಸೂಲಿಯನ್ನ ಬಂದ್ ಮಾಡಿ ಎಂದು ಸಚಿವರಿಗೆ ಶಾಸಕ ಅಮೃತ ದೇಸಾಯಿ ಮನವಿ ಮಾಡಿಕೊಂಡರು.
ಆದರೆ, ಸ್ವತಃ ತಮ್ಮದೇ ಪಕ್ಷದ ಶಾಸಕರಿಗೂ ಸರಕಾರ ತಪ್ಪು ಮಾಹಿತಿ ನೀಡುವುದನ್ನ ನಿಲ್ಲಿಸದೇ ಇರುವುದು ಸೋಜಿಗವೇ ಸರಿ.