Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ‘ಕುಮಾರಸ್ವಾಮಿ’ ಸಿಡಿ- ಇಲ್ಲೂ ಬ್ಲ್ಯಾಕ್ ಮೇಲ್…!

Spread the love

ಹುಬ್ಬಳ್ಳಿ: ತನ್ನ ಪ್ರೇಯಿಸಿಯೊಂದಿಗಿದ್ದ ಸಮಯದಲ್ಲಿ ಶೂಟ್ ಮಾಡಿದ್ದ ರೌಡಿಗಳ ಗುಪೊಂದು ಹಣಕ್ಕಾಗಿ ಪೀಡಿಸಿ, ಹಲ್ಲೆ ಮಾಡಿರುವ ಪ್ರಕರಣವೊಂದು ಗೋಕುಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕುಮಾರಸ್ವಾಮಿ ಎಂಬ ಯುವಕ ತನ್ನ ಪ್ರೇಯಿಸಿ ಜೊತೆಗಿದ್ದಾಗ ಅಕ್ಷಯ ಪಾರ್ಕ್ ನಿವಾಸಿಗಳಾದ ಶಕ್ತಿರಾಜ ದಾಂಡೇಲಿ ಸೇರಿದಂತೆ ಹಲವರು ಶೂಟ್ ಮಾಡಿದ್ದಾರೆ. ಇದೇ ವೀಡಿಯೋ ಇಟ್ಟುಕೊಂಡು ಕುಮಾರಸ್ವಾಮಿಯನ್ನ ಬ್ಲ್ಯಾಕ್ ಮೇಲ್ ಮಾಡಲಾಗಿತ್ತಂತೆ.

ಶಕ್ತಿರಾಜ ದಾಂಡೇಲಿ ಜೊತೆಗೆ ಸಂತೋಷ ಬ್ಯಾಹಟ್ಟಿ, ರಾಹುಲ ಪ್ರಭು ಸೇರಿದಂತೆ ಹಲವರು ಕುಮಾರಸ್ವಾಮಿಯನ್ನ ಅಪಹರಿಸಿ ಹಣಕ್ಕಾಗಿ ಪೀಡಿಸಿದ್ದರಂತೆ. ಅಷ್ಟೇ ಅಲ್ಲ, ಮೀಡಿಯಾದವರಿಗೆ ವೀಡಿಯೋ ಕೊಡುವುದಾಗಿ ಬೆದರಿಕೆ ಹಾಕಿದ್ದರಂತೆ.

ಘಟನೆಯ ಬಗ್ಗೆ ಕುಮಾರಸ್ವಾಮಿ ತಾಯಿ ಗೋಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.


Spread the love

Leave a Reply

Your email address will not be published. Required fields are marked *