ಕೋರ್ಟ್ ಆವರಣದಲ್ಲಿ ವಕೀಲರ ಹತ್ಯೆ- 18 ಬಾರಿ ತಲ್ವಾರನಿಂದ ಹಲ್ಲೆ- ಸಿಸಿಟಿವಿ ದೃಶ್ಯ….!

ವಿಜಯನಗರ (ಹೊಸಪೇಟೆ): ಕೋರ್ಟ್ ಆವರಣದಲ್ಲಿಯೇ ಕಾಂಗ್ರೆಸ್ ಮುಖಂಡರು ಆಗಿದ್ದ ವಕೀಲರೊಬ್ಬರನ್ನ ನ್ಯಾಯಾಲಯದ ಆವರಣದಲ್ಲಿ ಹತ್ಯೆ ಮಾಡಿದ್ದ ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು ವೈರಲ್ ಆಗಿದ್ದು, ಕೊಲೆಗಾರ 18 ಬಾರಿ ಮಚ್ಚನ್ನ ಬೀಸಿದ್ದಾನೆ.
ವಕೀಲ, ಕಾಂಗ್ರೆಸ್ ಮುಖಂಡ ಡಾ.ತಾರಿಹಳ್ಳಿ ವೆಂಕಟೇಶ್ ಕೊಲೆಯಾಗಿದ್ದು, ಕೋರ್ಟ್ ಆವರಣದಲ್ಲಿ ಕೂತ ಸಮಯದಲ್ಲಿ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಲಾಗಿತ್ತು. ಹತ್ಯೆಯನ್ನ ಮನೋಜ್ ಎಂಬ ಯುವಕನೇ ಮಾಡಿದ್ದು. ಖುರ್ಚಿಯ ಮೇಲೆ ಕೂತಾಗಲೇ ಅಟ್ಯಾಕ್ ಮಾಡುತ್ತಾನೆ.
ಮನೋಜ ಎಂಬಾತ ಬೆಳಿಗ್ಗೆಯಿಂದಲೇ ಕೋರ್ಟ್ ಆವರಣದಲ್ಲಿ ಕಾಯುತ್ತ ಕುಳಿತಿದ್ದನಂತೆ. ನಂತರ ವಕೀಲ ಡಾ.ತಾರಿಹಳ್ಳಿ ವೆಂಕಟೇಶ ಬಂದು, ಆರಾಮಾಗಿ ಕೂತ ಮೇಲೆ, ಚೀಲದಲ್ಲಿ ತೆಗೆದುಕೊಂಡು ಹೋಗಿದ್ದ ಮಚ್ಚಿನಿಂದ ಹತ್ಯೆ ಮಾಡಿದ್ದಾನೆಂದು ಹೇಳಲಾಗಿತ್ತು, ಅದೀಗ ಸಿಸಿಟಿವಿ ಮೂಲಕ ಬಹಿರಂಗವಾಗಿದೆ.
ಕೋರ್ಟ್ ಆವರಣದಲ್ಲಿ ಮನೋಜ ಬರುವ ಹಾಗೂ ಚೀಲದಿಂದ ಮಚ್ಚನ್ನ ತೆಗೆದು ಹೊಡೆಯುವ ಸಂಪೂರ್ಣ ವೀಡಿಯೋ ಸಿಸಿಟಿವಿ ಮೂಲಕ ಹೊರ ಬಂದಿದೆ. ಅಷ್ಟೇ ಅಲ್ಲ, ಕೆಲವರು ಖುರ್ಚಿಯನ್ನ ಹಿಡಿದುಕೊಂಡು ಓಡುವುದು ದೃಶ್ಯದಲ್ಲಿ ಕಾಣುತ್ತದೆ.