Karnataka Voice

Latest Kannada News

“ಪಟ್ಗಾ” ಸುತ್ತಿದ ಶಾಸಕ ಅಮೃತ ದೇಸಾಯಿ…!

ಧಾರವಾಡ: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಧಾರವಾಡದಲ್ಲಿ ವಿಜೃಂಭಣೆಯಿಂದ ಕಾರ್ಯಕ್ರಮ ಆಯೋಜಿಸಿ, ಶಿವಾಜಿ ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ನಡೆಸಲಾಯಿತು.

ಶಾಸಕ ಅಮೃತ ದೇಸಾಯಿ ಸೇರಿದಂತೆ ಹಲವರು ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಶಿವಾಜಿ ಮಹಾರಾಜರು, ಪ್ರತಿಯೊಬ್ಬರ ಮನದಲ್ಲಿ ಮನೆ ಮಾಡಿದ ವೀರರು. ಅವರ ಮನೋಭಾವನೆಯನ್ನ ನಾವೂ ಅರ್ಥ ಮಾಡಿಕೊಂಡು ಮುನ್ನಡೆಯಬೇಕಾಗಿದ್ದು ಎಲ್ಲರ ಧರ್ಮವಾಗಬೇಕೆಂಬಂತೆ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು.

ಬಿಜೆಪಿ ಮುಖಂಡ ಈರೇಶ ಅಂಚಟಗೇರಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ತವನಪ್ಪ ಅಷ್ಟಗಿ, ಸುನೀಲ ಮೋರೆ, ಶ್ರೀನಿವಾಸ ಕೋಟ್ಯಾನ, ಶಂಕರ ಶೇಳಕೆ, ಹರೀಶ ಬಿಜಾಪುರ, ಮಂಜು ಕಮ್ಮಾರ, ಶಕ್ತಿ ಹಿರೇಮಠ, ಅರವಿಂದ ಏಗನಗೌಡರ, ಜಗ್ಗು ಚಿಕ್ಕಮಠ, ವಿನಾಯಕ ಗೊಂದಳಿ, ಮುತ್ತು ಬನ್ನೂರ, ನಿಂಗಪ್ಪ ಸಪ್ಪುರಿ ಸೇರಿದಂತೆ ನೂರಾರೂ ಶಿವಾಜಿ ಮಹಾರಾಜರ ಅಭಿಮಾನಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *