Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಫೆ.21ಕ್ಕೆ ಉಚಿತ ನರರೋಗ ತಪಾಸಣೆ

Spread the love

ಹುಬ್ಬಳ್ಳಿ: ಸಾರ್ವಜನಿಕರ ಅನುಕೂಲಕ್ಕಾಗಿ ನಗರದಲ್ಲಿ ಫೆಬ್ರುವರಿ 21ರಂದು ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೆ ಉಚಿತ ನರ ರೋಗ ತಪಾಸಣೆಯನ್ನ ನರ ವಿಜ್ಞಾನದಲ್ಲಿ ಆಯೋಜನೆ ಮಾಡಲಾಗಿದೆ.

ಮೆದುಳು, ಬೆನ್ನುಹುರಿ ಶಸ್ತ್ರ ಚಿಕಿತ್ಸಕ ತಜ್ಞರಾದ ಡಾ.ವಿಜಯಮಹಾಂತೇಶ ಪೂಜಾರಿಯವರು ಉಚಿತವಾಗಿ ತಪಾಸಣೆ ಮಾಡಲಿದ್ದಾರೆ. ಹುಬ್ಬಳ್ಳಿಯ ಹಳೇ ಕೋರ್ಟ್ ವೃತ್ತದ ಬಳಿಯಿರುವ ಗಿರಿರಾಜ್ ಅನೇಕ್ಸ್ ಬಿಲ್ಡಿಂಗದಲ್ಲಿ ಆಯೋಜನೆ ಮಾಡಲಾಗಿದೆ.

ಉಚಿತವಾಗಿ ನಡೆಯಲಿರುವ ತಪಾಸಣೆಯಲ್ಲಿ ನರ ರೋಗದಿಂದ ಬಳಲುತ್ತಿರುವವರು ಭಾಗವಹಿಸಬಹುದಾಗಿದೆ. ಬರುವಾಗ ರೋಗಿಗಳ ಹಳೇಯ ರಿಪೋರ್ಟ್ ಇದ್ದರೇ, ತೆಗೆದುಕೊಂಡು ಬರುವಂತೆ ಮನವಿ ಮಾಡಿಕೊಳ್ಳಲಾಗಿದೆ.

ಹೆಚ್ಚಿನ ಮಾಹಿತಿಗಾಗಿ 0836-2956622, 9986956622 ಸಂಪರ್ಕಿಸಲು ಕೋರಲಾಗಿದೆ.


Spread the love

Leave a Reply

Your email address will not be published. Required fields are marked *