10ಲಕ್ಷ ಸಾಲದ ಮದುವೆ-ಕೈ ಕೊಟ್ಟ ಹೆಂಡತಿ: ಪತಿರಾಯ ಲುಂಗಿಯಿಂದ ನೇಣಿಗೆ ಶರಣು..!
Warning: Attempt to read property "post_excerpt" on null in /home/karnatakavoice2026s/webapps/karnatakavoice2026s/wp-content/themes/newsphere/inc/hooks/hook-single-header.php on line 67
ಧಾರವಾಡ: ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಮರವೊಂದಕ್ಕೆ ಲುಂಗಿಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಹಳ್ಳಿಕೇರಿ ಗ್ರಾಮದ ಹನುಮರೆಡ್ಡಿ ಪ್ರಹ್ಲಾದರೆಡ್ಡಿ ಜಕರೆಡ್ಡಿ ಎಂಬಾತನೇ ನೇಣಿಗೆ ಶರಣಾಗಿದ್ದಾನೆ. ತಾನು ಮದುವೆ ಮಾಡಿಕೊಳ್ಳುವಾಗ 10 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ. ಆದರೂ, ಹೆಂಡತಿಯೊಂದಿಗೆ ಸಾಂಸಾರಿಕ ಜೀವನ ನಡೆಸಲು ಆಗಲಿಲ್ಲವೆಂದು ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಹೇಳಲಾಗಿದೆ.
35 ವಯಸ್ಸಿನ ಹನುಮರೆಡ್ಡಿ ಮಡದಿಯ ಸಂಬಂಧವಾಗಿ ತೀರಾ ಮನಸ್ಸಿಗೆ ಹಚ್ಚಿಕೊಂಡಿದ್ದ. ತನ್ನ ಪತ್ನಿಯ ಜೊತೆಗೆ ಜೀವನ ನಡೆಸಲು ಆಗಲಿಲ್ಲವೆಂಬ ಕೊರಗು ಆತನನ್ನ ಪದೇ ಪದೇ ಕಾಡುತ್ತಿತ್ತು. ಇದೇ ಕಾರಣಕ್ಕೆ ತನ್ನದೇ ಹೊಲದಲ್ಲಿನ ಬನ್ನಿ ಗಿಡಕ್ಕೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾನೆ.
ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಲಾಗಿದೆ.

