ಹುಬ್ಬಳ್ಳಿ ಕಾರವಾರ ರಸ್ತೆಯಲ್ಲಿ ಬಸ್ ಹಾಯ್ದು ಯುವಕ ದುರ್ಮರಣ..!
Warning: Attempt to read property "post_excerpt" on null in /home/karnatakavoice2026s/webapps/karnatakavoice2026s/wp-content/themes/newsphere/inc/hooks/hook-single-header.php on line 67
ಹುಬ್ಬಳ್ಳಿ: ನಗರದ ಕಾರವಾರ ರಸ್ತೆಯ ಕೆಇಬಿ ಗ್ರೀಡ್ ಬಳಿಯಲ್ಲಿಹುಬ್ಬಳ್ಳಿಯಿಂದ ಲಕ್ಷ್ಮೇಶ್ವರಕ್ಕೆ ಹೊರಟಿದ್ದ ಬಸ್ಸೊಂದು ಯುವಕನ ಮೇಲೆ ಹಾಯ್ದ ಪರಿಣಾಮ ಯುವಕ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ನಡೆದಿದೆ.
ಬೈಕಿನಲ್ಲಿ ಕುಡಿಯಲು ನೀರು ತರಲು ಹೋಗಿದ್ದ ಸಮಯದಲ್ಲಿ ಕಾರೊಂದನ್ನು ಓವರ್ ಟೇಕ್ ಮಾಡಲು ಹೋದಾಗ, ಬೈಕ್ ಹಿಂಬದಿ ಕೂತಿದ್ದ ಯುವಕ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ. ಅದೇ ಸಮಯದಲ್ಲಿ ಬಸ್ ಹಿಂದಿನಿಂದ ಬಂದು ಆತನ ತಲೆ ಮೇಲೆ ಹಾಯ್ದ ಪರಿಣಾಮ ದುರ್ಘಟನೆ ನಡೆದಿದೆ. ಮೃತಪಟ್ಟ ಯುವಕ ಕೆಲವು ದಿನಗಳ ಹಿಂದೆಯಷ್ಟೇ ಉತ್ತರ ಪ್ರದೇಶದಿಂದ ಕೆಲಸಕ್ಕೆಂದು ಹುಬ್ಬಳ್ಳಿಗೆ ಬಂದಿದ್ದ ಎಂದು ತಿಳಿದು ಬಂದಿದ್ದು, ನೀರು ತರಲು ಹೋದಾಗ ಅವಘಡ ಸಂಭವಿಸಿದೆ .
ದುರ್ಘಟನೆ ನಡೆಯುತ್ತಿದ್ದ ಹಾಗೇ ಕಾರವಾರ ರಸ್ತೆಯಲ್ಲಿ ಸಂಪೂರ್ಣ ಸಂಚಾರ ಅಸ್ತವ್ಯಸ್ತಗೊಂಡಿತ್ತು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಸಂಚಾರಿ ಠಾಣೆಯ ಪೊಲೀಸರು ಶವವನ್ನ ಕಿಮ್ಸಗೆ ರವಾನೆ ಮಾಡಿ, ಸಂಚಾರವನ್ನ ಸುಗಮಗೊಳಿಸಿದರು.
ಯುವಕನ ವಿವರವನ್ನ ಸಂಚಾರಿ ಠಾಣೆಯ ಪೊಲೀಸರು ಪಡೆಯುತ್ತಿದ್ದು, ಪ್ರಕರಣ ದಕ್ಷಿಣ ಸಂಚಾರಿ ಠಾಣೆಯಲ್ಲಿ ದಾಖಲಾಗಿದೆ. ಘಟನೆಯಲ್ಲಿದ್ದ ಬಸ್ ಹಾಗೂ ಸ್ಕೂಟಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

