ದೇಶದ್ರೋಹಿ ಪ್ರಕರಣ: ಕೇಸ್ ಗ್ರಾಮೀಣ ಠಾಣೆಗೂ-ವಿದ್ಯಾರ್ಥಿಗಳು ಹಿಂಡಲಗಾಗೂ ಶಿಫ್ಟ್
1 min readಹುಬ್ಬಳ್ಳಿ: ಕೆಎಲ್ ಇ ಕಾಲೇಜಿನಲ್ಲಿ ಪಾಕ್ ಪರ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಧಾರವಾಡ ಪೊಲೀಸ ಆಯುಕ್ತರ ಹೇಳಿಕೆ ನೀಡಿದ್ದು, ಪ್ರಕರಣವನ್ನ ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ನ್ಯಾಯಾಧೀಶರ ಅನುಮತಿ ಪಡೆದು ವರ್ಗಾಯಿಸಲಾಗಿದೆ. ಪ್ರಕರಣದಲ್ಲಿ ಯಾವುದೇ ಗೊಂದಲವಿಲ್ಲ, ತನಿಖೆಯ ಹಂತದಲ್ಲಿದೆಯಿದೆಯಾದ್ದರಿಂದ ಎನೂ ಮಾತನಾಡಲ್ಲ. ಸಿಆರ್ ಪಿಸಿ ಬಾಂಡ್ ೧೬೯ ಮೇಲೆ ಬಿಡುಗಡೆ ಬಗ್ಗೆ ನೋ ಕಮೆಂಟ್ಸ್ ಎಂದ ಕಮೀಷನರ್.
ಪ್ರಕರಣವನ್ನ ಕಾನೂನು ರೀತಿಯಲ್ಲೆ ತನಿಖೆ ನಡೆಸುತ್ತಿದ್ದೇವೆ. ಸೂಕ್ತ ಕಾನೂನು ಸಲಹೆ ಪಡೆದೇ ತನಿಖೆ ನಡೆಸಿದ್ದೇವೆ. ಪೋಷಕರು ಭೇಟಿ ಮಾಡಲು ಬಂದ ವಿಚಾರಕ್ಕೆ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಪೊಲೀಸ ಕಮೀಷನರ್.
ದೇಶದ್ರೋಹಿ ವಿದ್ಯಾರ್ಥಿಗಳು ಬೆಳಗಾವಿಗೆ ಶಿಪ್ಟ್
ಹುಬ್ಬಳ್ಳಿಯ ಉಪ ಕಾರಾಗೃಹದಿಂದ ಬೆಳಗಿನ ಜಾವವೇ ಸ್ಥಳಾಂತರ ಮಾಡಿದ್ದಾರೆ ಪೊಲೀಸರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತೆ ವಹಿಸಿ, ಅವರನ್ನ ಶಿಫ್ಟ್ ಮಾಡಲಾಗಿದೆ ಎಂದು ಸೂಪರಿಟೆಂಡೆಂಟ್ ಅಶೋಕ ಭಜಂತ್ರಿ ಮಾಹಿತಿ ನೀಡಿದ್ದಾರೆ. ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಪ್ರತ್ಯೇಕ ಸೆಲ್ ನಲ್ಲಿ ಪಾಕ್ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳನ್ನಿಡಲಾಗಿದೆ.