ಉದ್ದೇಶಿತ ರಾಮ ಮಂದಿರಕ್ಕೆ ಠಾಕ್ರೆ ಒಂದು ಕೋಟಿ ದೇಣಿಗೆ
1 min readಉತ್ತರಪ್ರದೇಶ: ಅಯೋಧ್ಯೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ರಾಮಮಂದಿರ ನಿರ್ಮಾಣಕ್ಕೆ ಶಿವಸೇನಾ ಮುಖ್ಯಸ್ಥ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ ಠಾಕ್ರೆ ತಮ್ಮ ಸಂಸ್ಥೆ ವತಿಯಿಂದ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಮಹಾರಾಷ್ಟ್ರ ಸರಕಾರ ನೂರು ದಿನ ತುಂಬಿದ ಹಿನ್ನೆಲೆಯಲ್ಲಿ ಅಯೋಧ್ಯೆಗೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಸ್ವಂತ ಟ್ರಸ್ಟ್ ಮೂಲಕ ಹಣವನ್ನ ನೀಡಿದ್ದಾರೆ. ಇದೇ ಸಮಯದಲ್ಲಿ ಮಾತನಾಡಿರುವ ಸಿಎಂ ಠಾಕ್ರೆ, ಮಂದಿರ ನಿರ್ಮಾಣ ಕಾರ್ಯ ಯಾವಾಗ ಮುಗಿಯುವುದೋ ಗೊತ್ತಿಲ್ಲ. ನಾನಂತೂ ಮಂದಿರ ನಿರ್ಮಾಣ ಯಾವಾಗ ಪೂರ್ಣಗೊಳ್ಳತ್ತೋ ಎಂದು ಕಾತುರದಲ್ಲಿದ್ದೇನೆ. ಮುಗಿದ ತಕ್ಷಣವೇ ರಾಮಲಲ್ಲಾ ದರ್ಶನಕ್ಕೆ ಬರುವೆ ಎಂದಿದ್ದಾರೆ.