Karnataka Voice

Latest Kannada News

ಕೊರೋನಾ ಎಫೆಕ್ಟ್: ಆರು ಎಕರೆ ದ್ರಾಕ್ಷಿ ಬೆಳೆ ನಾಶ: ನಲುಗಿದ ರೈತ

ಚಿಕ್ಕೋಡಿ: ಆರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೂವತ್ತು ಲಕ್ಷ ರೂಪಾಯಿ ಮೌಲ್ಯದ ದ್ರಾಕ್ಷಿ ಬೆಳೆ ಕೊರೋನಾ ಎಫೆಕ್ಟ್ ನಿಂದ ನಾಶವಾಗಿರುವ ಪ್ರಕರಣ ನಾಗರಾಳ ಗ್ರಾಮದಲ್ಲಿ ನಡೆದಿದೆ.

18 ಲಕ್ಷ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ದ್ರಾಕ್ಷಿಗೆ ಬೆಲೆ ಬಾರದೇ ರೈತ ಕಂಗಾಲಾಗಿದ್ದಾನೆ. ಹೊಲದ ಮಾಲೀಕ ಮಲ್ಲೇಶ ಚೌಗಲಾ ಈ ಪರಿಸ್ಥಿತಿಯಿಂದ ಕಂಗಾಲಾಗಿದ್ದು, ಏನೂ ಮಾಡಬೇಕೆಂದು ತೋಚದ ಸ್ಥಿತಿಗೆ ತಲುಪಿದ್ದಾರೆ. ರಾಯಭಾಗ ತಾಲೂಕಿನ ಹಲವು ರೈತರು ಇಂತಹದೇ ಸಮಸ್ಯೆ ಎದುರಿಸುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

Leave a Reply

Your email address will not be published. Required fields are marked *