Posts Slider

Karnataka Voice

Latest Kannada News

ಗಂಡ ಹೆಂಡಿರ ಜಗಳ:  ಬಿಡಿಸಲು ಬಂದ ಪೇದೆ ಮೇಲೆ ಹಲ್ಲೆ

Spread the love

ಮಂಡ್ಯ: ಕುಡಿದು ಹೆಂಡತಿಯೊಂದಿಗೆ ಜಗಳಕ್ಕೆ ಇಳಿದಿದ್ದ ಗಂಡ, ಬಿಡಿಸಲು ಬಂದ ಪೊಲೀಸ್ ನ ಮೇಲೆಯೂ ಹಲ್ಲೆ ಮಾಡಿರುವ ಘಟನೆ ಮದ್ದೂರು  ತಾಲೂಕಿನ ಅರೆಕಲ್ ದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಬೆಸಗರಳ್ಳಿ ಪೊಲೀಸ್ ಠಾಣೆಯ ಪೇದೆ ಶಿವರಾಜ್ ಗಾಯಗೊಂಡ ಪೇದೆಯಾಗಿದ್ದು, ಅರೆಕಲ್ ದೊಡ್ಡಿ ಗ್ರಾಮದ ವೆಂಕಟಸ್ವಾಮಿ ಹಲ್ಲೆ ಮಾಡಿದ ಆರೋಪಿಯಾಗಿದ್ದಾನೆ. ರಾತ್ರಿ ಕುಡಿದು ಬಂದು ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದ. ಈ ವೇಳೆ ಪೊಲೀಸರಿಗೆ ಆರೋಪಿಯ ಪತ್ನಿ ಫೋನ್ ಮಾಡಿದ್ದರು. ಆಗ ಸ್ಥಳಕ್ಕೆ ಬಂದ  ಪೊಲೀಸರ ಮೇಲೆ  ಆರೋಪಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ತೀವ್ರ ಗಾಯಗೊಂಡ ಪೇದೆ ಮದ್ದೂರು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *