Posts Slider

Karnataka Voice

Latest Kannada News

ಬಾರಿ ಮಳೆಗೆ ಬೆದರಿದ ರೈತ: ಮಾವು-ನಿಂಬೆ ಹಾನಿ: ಸರಕಾರಕ್ಕೆ ಮೊರೆ

Spread the love

ವಿಜಯಪುರ: ನಿರಂತರವಾಗಿ ಸುರಿದ ಬಾರಿ ಮಳೆಗೆ ನಿಂಬೆ, ಮಾವು ಹಾನಿಯಾಗಿದ್ದು, ಬಿರುಗಾಳಿಗೆ ಮಾವು ಹಾಗೂ ನಿಂಬೆ ಗಿಡಗಳು ನೆಲಕ್ಕುರುಳಿದ್ದು, ರೈತ ಮತ್ತಷ್ಟು ಕಂಗಾಲಾಗಿದ್ದಾನೆ.

ಸಿಂದಗಿ ತಾಲೂಕಿನ ಡಂಬಳ, ಸಾಸಬಾಳ, ಗೋಲಗೇರಿ ಗ್ರಾಮಗಳಲ್ಲಿ ಬಹುತೇಕ ಮಳೆಯಾಗಿದ್ದು, ಮಾವು-ನಿಂಬೆ ಗಿಡಗಳು ಕೆಳಗುರಳಿವೆ. ರೇಷ್ಮೇ ಬೆಳೆಯ ಶೆಡ್ ಗಳು ಕೂಡಾ ನೆಲಕ್ಕುರಳಿದ್ದು, ಹಾನಿಯಿಂದ ರೈತರ ಜೀವನ ಮತ್ತಷ್ಟು ಹದಗೆಡಲಿದೆ. ಮಳೆಯಿಂದ ರೈತರಿಗೆ ಲಕ್ಷಾಂತರ ರೂಪಾಯಿ ಬೆಳೆ  ಹಾನಿಯಾಗಿದ್ದು, ಬೆಳೆ ಹಾನಿಯಾದ ಹೊಲಗಳಿಗೆ ತೋಟಗಾರಿಕಾ ಇಲಾಖೆ ಅಧಿಕಾರಿ ಬೂದಿಹಾಳ ಭೇಟಿ ಪರಿಶೀಲನೆ ನಡೆಸಿದರು.


Spread the love

Leave a Reply

Your email address will not be published. Required fields are marked *