ಹಣ ವಸೂಲಿ ಮಾಡುತ್ತಿದ್ದ ನಟೋರಿಯಸ್ ಪಡೆಯನ್ನ ಹೆಡಮುರಿಗೆ ಕಟ್ಟಿದ ರಾಯಚೂರು ಪೊಲೀಸರು
1 min readರಾಯಚೂರು: ಅಕ್ರಮಕೂಟ ರಚಿಸಿಕೊಂಡು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಡಕಾಯಿತರನ್ನ ಬಂಧಿಸುವಲ್ಲಿ ರಾಯಚೂರು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಯಚೂರಿನ ಮಹ್ಮದ್ ಗೌಸ್ ತಂಡದ 12 ಜನರನ್ನ ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಮಹ್ಮದಗೌಸ್ ತಲೆ ಮರೆಸಿಕೊಂಡಿದ್ದಾನೆ. ಮೇ 8ರಂದು ಶಕ್ತಿನಗರದ ರಾಘವೇಂದ್ರ ಕಾಲೋನಿಯಲ್ಲಿ ಗುತ್ತಿಗೆದಾರರಿಗೆ ಹೆದರಿಸಿ ಹಣ ವಸೂಲಿ ಮಾಡಿದ್ದ ಗ್ಯಾಂಗ್. ಮಹ್ಮದ್ ಗೌಸ್ ಹಾಗೂ 17 ಜನರು ಸೇರಿ ಪಿಸ್ತೂಲ್ ತೋರಿಸಿ ಹಣ ವಸೂಲಿ ಮಾಡಿದ್ದರು.
ಕೇರಳ ಮೂಲದ ಗುತ್ತಿಗೆದಾರ ಹರ್ಷನ್ ಎಂಬುವರಿಂದ ೫ ಲಕ್ಷ ರೂ. ತಮ್ಮ ಖಾತೆಗೆ ಟ್ರಾನ್ಸ್ ಫರ್ ಮಾಡಿಸಿಕೊಂಡಿದ್ದ ಡಕಾಯಿತರು, ಇನ್ನೂ ೧೫ ಲಕ್ಷ ಬೇಡಿಕೆ ಇಟ್ಟಿದ್ದ ಹಿನ್ನೆಲೆ ಹರ್ಷನ್ ರಿಂದ ದೂರು ನೀಡಿಲಾಗಿತ್ತು. ದೂರಿನ ಹಿನ್ನೆಲೆ ರಾಯಚೂರು ಗ್ರಾಮೀಣ ಠಾಣೆ ಪೊಲೀಸರಿಂದ ಕಾರ್ಯಾಚರಣೆ ನಡೆದಿದೆ.