Posts Slider

Karnataka Voice

Latest Kannada News

ಉಡುಪಿಯ ಬಿ ಆರ್ ಶೆಟ್ಟಿ  ಆಸ್ಪತ್ರೆ ವಿವಾದ: ನಡೆಸಲು ಆಗಲ್ಲವೆಂದ ಶೆಟ್ಟಿಗಾರು

Spread the love

ಉಡುಪಿ: ಸರಕಾರಿ ಆಸ್ಪತ್ರೆಯನ್ನು ಗುತ್ತಿಗೆ ಆಧಾರದಲ್ಲಿ ಪಡೆದು ತಾನೇ ನಡೆಸುತ್ತೇನೆ. ಸುಸಜ್ಜಿತ ಹಾಸ್ಪಿಟಲ್  ಕೊಡುತ್ತೇನೆ ಎಂದು ರಾಜ್ಯಾಧ್ಯಂತ ಪ್ರಚಾರ ಪಡೆದಿದ್ದ ಬಿ.ಆರ್.ಶೆಟ್ಟಿ, ಇದೀಗ ತನಗೆ ಹಾಸ್ಪಿಟಲ್ ನಡೆಸಲು ಸಾಧ್ಯವಿಲ್ಲವೆಂದು ಕೈ ಎತ್ತಿದ್ದಾರೆ.

b.r.shetty

ಏಪ್ರಿಲ್ ನಂತರ ನಡೆಸಲು ಸಾಧ್ಯವಿಲ್ಲ ಎಂದು ಮುಖ್ಯ ಕಾರ್ಯದರ್ಶಿ ಗೆ  ಪತ್ರ  ಬರೆದಿರುವ  ಬಿ.ಆರ್. ಶೆಟ್ಟಿ ನಿಲುವಿನಿಂದ ಉಡುಪಿ ಶಾಸಕ ರಘುಪತಿ ಭಟ್ ಕೆಂಡಾಮಂಡಲವಾಗಿದ್ದಾರೆ. ಡಾ.  ಬಿ ಆರ್ ಶೆಟ್ಟಿ  ಬ್ಲಾಕ್ ಮೇಲ್ ತಂತ್ರಕ್ಕೆ ಮಣಿಯುವ ಪ್ರಶ್ನೆ ಇಲ್ಲ. ಬಿ ಆರ್ ಶೆಟ್ಟಿ ಸರಕಾರಿ ಆಸ್ಪತ್ರೆಯ ಪಕ್ಕದಲ್ಲಿ ಖಾಸಗಿ ಆಸ್ಪತ್ರೆ ತೆರೆದು ಉದ್ಯಮ ನಡೆಸಲು ಮುಂದಾಗಿದ್ದಾರೆ. ಹೊಸದಾಗಿ ಕಟ್ಟಲು ಹೊರಟಿರುವ 400 ಬೆಡ್ಡಿನ ಆಸ್ಪತ್ರೆ ಕಾನೂನು ಬದ್ಧವಾಗಿಲ್ಲ. ಉಡುಪಿಯಲ್ಲಿ ತಳಮಟ್ಟದಲ್ಲಿ ಮೂರು ಮಹಡಿ ನಿರ್ಮಿಸಲು ಅನುಮತಿ ಇಲ್ಲ. ಆದರೂ ಬಿಆರ್ ಶೆಟ್ಟಿ ಅವರು ಮೂರು ಮಹಡಿ ನಿರ್ಮಿಸಲು ಮುಂದಾಗಿದ್ದಾರೆ ಎಂದು ಶಾಸಕ ಟೀಕಿಸಿದ್ದಾರೆ.


Spread the love

Leave a Reply

Your email address will not be published. Required fields are marked *