ಕೊರೋನಾ ಸೋಂಕು ನಿವಾರಕ ಲಸಿಕೆ: ಅಧಿಕಾರಿಗಳ ಮಹತ್ವದ ಸಭೆ

ಬೆಂಗಳೂರು: ಬೆಂಗಳೂರಿನ ಶ್ರೀ ರಂಗದೊರೈ ಆಸ್ಪತ್ರೆಯ ವೈದ್ಯ, ಹೆಸರಾಂತ ಮೂತ್ರರೋಗ ವಿಶೇಷಜ್ಞ ಮತ್ತು ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ಶಂಕರ ವೈರಾಲಜಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಕೆ.ಎನ್.ಶ್ರೀಧರ್ ಅವರು ಮುಖ್ಯಮಂತ್ರಿಗಳ ಖಾಸಗಿ ಸಂವಹನಕಾರರನ್ನು ಕುಮಾರ ಕೃಪದಲ್ಲಿ ಭೇಟಿ ಮಾಡಿ ಕೋವಿಡ್ ಭಯದಲ್ಲಿರುವ ಜನರಿಗೆ ಲಸಿಕೆ ನೀಡುವ ಕುರಿತಂತೆ ಚರ್ಚೆ ನಡೆಸಿದರು. ಹೋಮಿಯೋಪತಿ ಆಧಾರಿತ ಆಣ್ವಿಕ ಸಾರವನ್ನು ಅಭಿವೃದ್ಧಿಪಡಿಸಿ ಕೊರೋನಾ ಸೋಂಕು ನಿವಾರಕ ಲಸಿಕೆ ಅಭಿವೃದ್ಧಿ ಪಡಿಸಲಾಗಿದೆ. ಇದು ಎನ್ ಕೋವಿಡ್ -19 (ಕರೋನಾ) ರೋಗವನ್ನು ಪ್ರತಿರೋಧಿಸುತ್ತದೆ. ಈ ಲಸಿಕೆಯನ್ನು ಈಗ 2 ಲಕ್ಷ ಜನರಿಗೆ ವಿತರಿಸಲಾಗಿದೆ. ಶೃಂಗೇರಿ ಶಂಕರ ಮಠದ ಸಹಕಾರದಲ್ಲಿ ಲಸಿಕೆ ಅಭಿವೃದ್ಧಿ ಪಡಿಸಿದ್ದು ಈ ಲಸಿಕೆ ಉಚಿತವಾಗಿ ಲಭ್ಯವಿದೆ. ಸಭೆಯಲ್ಲಿ ಜಲಸಂಪನ್ಮೂಲ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಶಂಕರ್ ಎಸ್ ಎನ್ ಭಾಗವಹಿಸಿದ್ದರು.