ಜಮೀನಿನಲ್ಲಿ ಬಡಿದಾಡಿಕೊಂಡಿದ್ದ ಪ್ರಕರಣ: ತೀವ್ರ ಗಾಯಗೊಂಡಿದ್ದ ಮಹಿಳೆ ಸಾವು
1 min readಕೋಲಾರ: ಜಮೀನು ಗಲಾಟೆಯಲ್ಲಿ ತೀವ್ರವಾಗಿ ಗಾಯೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಕೋಲಾರದ RL ಜಾಲಪ್ಪ ಖಾಸಗಿ ಆಸ್ಪತ್ರೆಯಲ್ಲಿನಡೆದಿದೆ.
ಕೋಲಾರದಲ್ಲಿ ಮೇ 15 ರಂದು ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೋಲಾರ ತಾಲೂಕಿನ ಹೊಳೇರಹಳ್ಳಿ ಗ್ರಾಮದಲ್ಲಿ ಮಾರಾಮಾರಿ ನಡೆದಿತ್ತು, ದೊಣ್ಣೆಯಿಂದ ಹಲ್ಲೆಗೊಳಗಾಗಿದ್ದ ಮಹಿಳೆಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಹಿಳೆಯರನ್ನ ಅಟ್ಟಾಡಿಸಿ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದ ವಿಡಿಯೊ ವೈರಲ್ ಆಗಿತ್ತು,
ಗಾಯಗೊಂಡಿದ್ದ ಮುನಿನಾರಾಯಯಮ್ಮ ಮೃತಪಟ್ಟಿದ್ದು, ಮುನಿನಾರಾಯಮ್ಮನಿಗೆ ತಲೆ, ಕೈಗೆ ಬಲವಾಗಿ ಗಾಯವಾಗಿತ್ತು, ಚಿಕ್ಕ ವೆಂಕಟೇಶಪ್ಪ ಹಾಗು ಅಶೋಕ್ ಎನ್ನುವರ ಗುಂಪಿನ ಮದ್ಯೆ ಗಲಾಟೆ ನಡೆದು, ಇಬ್ಬರು ಮಹಿಳೆಯರು ಆಸ್ಪತ್ರೆಗೆ ದಾಖಲಾಗಿದ್ದರು. ಅಧಿಕಾರಿಗಳು ಸರ್ವೇ ನಂ 119 ರಲ್ಲಿ ಸ್ಮಶಾನ ಜಾಗ ಸರ್ವೆ ನಡೆಸೊ ವೇಳೆ ಗಲಾಟೆಯಾಗಿ ವೇಮಗಲ್ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲು ಮಾಡಿಕೊಂಡಿದ್ದರು.