Posts Slider

Karnataka Voice

Latest Kannada News

ಜೋಳದ ಲಾರಿಗೆ ವಿದ್ಯುತ್ ತಗುಲಿ ಮೂವರು ಕೂಲಿಗಳ ದುರ್ಮರಣ

1 min read
Spread the love

ಮೈಸೂರು: ಜೋಳ ತುಂಬಿದ ಲಾರಿಗೆ ವಿದ್ಯುತ್ ತಗುಲಿ ಲಾರಿಯಲ್ಲಿದ್ದ ಮೂವರು ಕೂಲಿ ಕಾರ್ಮಿಕರು ದುರ್ಮರಣಕ್ಕೀಡಾದ ಘಟನೆ ಜಿಲ್ಲೆಯ ಕೀಳನಪುರ  ಗ್ರಾಮದಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಟಿ ನರಸೀಪುರ ತಾಲೂಕಿನ ಹೊಸೂರು ಗ್ರಾಮದ ಕೂಲಿ ಕಾರ್ಮಿಕರಾದ ಮಹದೇವು, ತೇಜು ಮತ್ತು ಮಹದೇವ್ ನಾಯಕ ಸಾವಿಗೀಡಾದ ನತದೃಷ್ಟರು. ಕೀಳನ ಪುರದಿಂದ ಮೈಸೂರಿನ ಪಿಂಜರಾಪೋಲ್ ಸೊಸೈಟಿಗೆ ಮೇವು ಸಾಗಿಸುತ್ತಿದ್ದ ಕೂಲಿ ಕಾರ್ಮಿಕರು. ಸ್ಥಳಕ್ಕಾಗಮಿಸಿದ ವರುಣ ಠಾಣೆ ಪೊಲೀಸರು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಮೈಸೂರಿನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed