Posts Slider

Karnataka Voice

Latest Kannada News

ಕಾಂಗ್ರೆಸ್ ವಕ್ತಾರ ಉಗ್ರಪ್ಪರಿಗೆ ಹಿಂದೂ ಹೆಸರಲ್ಲಿ ಬೆದರಿಕೆ ಪತ್ರ: ಪೊಲೀಸರಿಗೆ ದೂರು

Spread the love

ಬೆಂಗಳೂರು: ಕಾಂಗ್ರೆಸ್ಸಿನ ಮಾಜಿ ಸಂಸದ ಹಾಗೂ ವಕ್ತಾರ ಉಗ್ರಪ್ಪ ಅವರಿಗೆ ಬೆದರಿಕೆ ಪತ್ರ ಬಂದಿದ್ದು, ಹಿಂದೂ ಹೆಸರಿನಲ್ಲಿ ಧಮಕಿ ಹಾಕಲಾಗಿದೆ. ಹಿಂದೂಗಳ ವಿರುದ್ಧವಾಗಿ ಮಾತನಾಡಿದರೇ ಸುಮ್ಮನಿರೋದಿಲ್ಲ ಎಂದು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರಿಗೆ ಉಗ್ರಪ್ಪ ದೂರು ದಾಖಲು ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಮಾತನಾಡಿರುವ ಉಗ್ರಪ್ಪ, ಸ್ವಾಮಿ ವಿವೇಕಾನಂದ ಅವರಿಗಿಂತ ಇವರೇನು ಹಿಂದುತ್ವದ ಬಗ್ಗೆ ತಿಳಿದುಕೊಂಡವರಲ್ಲ. ಕುವೆಂಪು ಅವರು ವಿಶ್ವ ಮಾನವ ಅಂತ ಮಾತಾಡಿದ್ರು. ಅತ್ಯಂತ ಸನಾತನ ಧರ್ಮ ಸಹಿಷ್ಣುತೆ ಹಿನ್ನೆಲೆಯಲ್ಲಿ ನಾನು ಬಂದವನು. ಸಾರ್ವಜನಿಕವಾಗಿ ನಾನು ನನ್ನ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ. ನಾನು ಹಿಂದು ಅಲ್ಲ ಅಂತ , ಪ್ರಚೋದನೆ ಮಾಡುವುದಕ್ಕೆ , ಧರ್ಮ ಧರ್ಮದ ನಡುವೆ ಏನಾದ್ರು ಸಂಘರ್ಷ ಮೂಡಿಸು  ರೀತಿಯಲ್ಲಿ ಪತ್ರ ಬರೆದಿದ್ದಾನೆ. ನನಗೆ ಇದು ಪ್ರಾಣ ಭಯ ಉಂಟುಮಾಡುವ ದೃಷ್ಟಿಯಲ್ಲಿ ಪತ್ರ ಬರೆದಿದ್ದಾರೆ. ಈ ಕೃತ್ಯದ ಬಗ್ಗೆ ಗೃಹ ಸಚಿವರಿಗೆ , ಕಮಿಷನರ್ ಕಚೇರಿ ಭೇಟಿ ನೀಡಿ ದೂರು ಕೊಟ್ಟಿದ್ದೇನೆ. ಕಮಿಷನರ್ ಕೂಡಲೇ ದೂರು ದಾಖಲೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಯಾರು ಮತೀಯವಾಧಿಗಳು ಯಾರು ಇದ್ದಾರೆ ಅವರನ್ನು ಮಟ್ಟಹಾಕುವ ಕೆಲಸ ಹಾಕಬೇಕು ಬೆದರಿಕೆ , ತ್ರೆಟ್ ಹಾಕುವ ಕೆಲಸ ಮಾಡಿದ್ದಾರೆ. ಹುಟ್ಟಿದವನು ಸಾಯಲೇಬೇಕು , ಆದ್ರೆ ಒಂದು ಕಾಸ್ ಪರ್ಪಸ್ ಬಗ್ಗೆ ಇದ್ರೆ ಬೇರೆ. ಹಿಂದುತ್ವದ ಬಗ್ಗೆ ನಾನು ಸಾರ್ವಜನಿಕವಾಗಿ ಚರ್ಚೆಗೆ ಸಿದ್ದನಿದ್ದೇನೆ. ಈ ರೀತಿಯಲ್ಲಿ ಪತ್ರದ ಮೂಲಕ ಬೆದರಿಕೆ ಹಾಕುವುದು ಬೇಡವೆಂದಿದ್ದಾರೆ.


Spread the love

Leave a Reply

Your email address will not be published. Required fields are marked *