Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯಲ್ಲಿ ನಿರಂತರ ಮಳೆ-ಸಿಡಿಲಿಗೆ ಬಲಿಯಾದ ಬಾಲಕ

1 min read
Spread the love

ಧಾರವಾಡ:  ತಡರಾತ್ರಿಯಿಂದಲೂ  ನಿರಂತರವಾಗಿ ಮಳೆ ಸುರಿಯುತ್ತಿದ್ದು, ರೈತರಿಗೆ ಅನುಕೂಲವಾಗಿದೆಯಾದರೂ, ಸಿಡಿಲಿನ ಹೊಡೆತಕ್ಕೆ ಬಾಲಕನೋರ್ವ ಅಸುನೀಗಿದ ಘಟನೆ ಅಮರಗೋಳದ  ಸಮೀಪ ನಡೆದಿದೆ.

ತಡರಾತ್ರಿಯಿಂದಲೂ ಒಂದೇ ಸಮನೆ ಮಳೆಯಾಗಿದ್ದು, ಮುಂಗಾರು ಬೆಳೆಯುವ ತರಾತುರಿಯಲ್ಲಿದ್ದ ರೈತರಿಗೆ ಅನುಕೂಲವಾಗಿದೆ. ಈ ಸಲದ ಮುಂಗಾರು ಹದವಾಗುವ ಲಕ್ಷಣಗಳು ಕಂಡು ಬಂದಿವೆ. ರಾತ್ರಿಯ ಮಳೆಯಿಂದ ಜಮೀನನಲ್ಲಿ ಹದವಾಗಿ ಹಸಿಯಾಗಿದೆ.

ಈ ನಡುವೆ ಕುರಿ ಮೇಯಿಸಲು ಹೋದ ಬಾಲಕ ಸಿಡಿಲು ಬಡಿದು ಸಾವಿಗೀಡಾಗಿದ್ದಾನೆ.  ಹುಬ್ಬಳ್ಳಿಯ ಅಮರಗೋಳದ  ಚಿಕ್ಕೇರಿ  ಪ್ಲಾಟನಲ್ಲಿ ಘಟನೆ ನಡೆದಿದ್ದು, ಮೃತ ಬಾಲಕನನ್ನ ಆಕಾಶ ಸಹದೇವಪ್ಪ ಸಾಯಣ್ಣವರ  ಎಂದು ಗುರುತಿಸಲಾಗಿದೆ.  ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು


Spread the love

Leave a Reply

Your email address will not be published. Required fields are marked *

You may have missed