ಆರ್.ಶಂಕರ-ಎಂಟಿಬಿ ನಾಗರಾಜ ಮತ್ತು ಎಚ್.ವಿಶ್ವನಾಥ್ ಮಂತ್ರಿ ಆಗ್ತಾರೆ: ಸಚಿವ ಬಿ.ಸಿ.ಪಾಟೀಲ
1 min readಬೆಂಗಳೂರು: ನಮ್ಮ ಜೊತೆಗೆ ಇದ್ದವರೂ ಎಲ್ಲರೂ ಮಂತ್ರಿ ಆಗಿಯೇ ಆಗುತ್ತಾರೆ. ಅದರಲ್ಲಿ ಯಾವುದೇ ಸಂಶಯ ಬೇಡ. 6ತಿಂಗಳು ನಾವೇಲ್ಲ ಕೂಡಿಯೇ ಇದ್ದೇವು. ಅವರನ್ನ ಕೈಬಿಡುವ ಪ್ರಶ್ನೆ ಬರೋದೇ ಇಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಪಾಟೀಲ, ಸರ್ಕಾರ ಬರಲು ಅವರೂ ಕೂಡ ಕಾರಣ. 6 ತಿಂಗಳು ನಾವೆಲ್ಲಾ ಒಟ್ಟಿಗೆ ಇದ್ದೆವು. ಅವರಿಗೆ ಮಿಸ್ ಆಗುವುದು ಸಾಧ್ಯ ಇಲ್ಲ. 100 ಕ್ಕೆ 100 ಅವರು ಮಂತ್ರಿ ಆಗುತ್ತಾರೆ. ಯಾವುದೇ ಕಾರಣಕ್ಕೂ ಅವರನ್ನು ಕೈ ಬಿಡುವ ಪ್ರಶ್ನೆ ಇಲ್ಲ ನಾವು ಅವರ ಪರ ಇದ್ದೇವೆ ಎಂದರು.
ರಾಣೆಬೆನ್ನೂರಿನ ಮಾಜಿ ಶಾಸಕ ಆರ್.ಶಂಕರ, ಎಂಟಿಬಿ ನಾಗರಾಜ ಮತ್ತು ಎಚ್.ವಿಶ್ವನಾಥ್ ಅವರನ್ನ ದೂರಿಡುವ ಪ್ರಯತ್ನ ನಡೆಯುತ್ತಿದೇಯಾ. ಸರಕಾರದಲ್ಲಿ ಅವರಿಗೆ ಸ್ಥಾನಮಾನ ಸಿಗುವುದಿಲ್ಲವೋ ಎಂಬ ಪ್ರಶ್ನೆ ಮೂಡುತ್ತಿರುವಾಗಲೇ ಬಿ.ಸಿ.ಪಾಟೀಲ ಹೇಳಿಕೆ ಮೂವರಿಗೂ ಖುಷಿಯನ್ನ ನೀಡಿದೆ.