Posts Slider

Karnataka Voice

Latest Kannada News

ನಾಲಿಗೆ ಮೇಲೆ ನಡೆಯೋರು ಯಡಿಯೂರಪ್ಪ ಮಾತ್ರ: ಎಚ್.ವಿಶ್ವನಾಥ

Spread the love

ಬೆಂಗಳೂರು: ಸಿಎಂ ಅವರನ್ನು ಭೇಟಿ ಮಾಡ್ತಾನೆ ಇರ್ತೇವೆ. ಮೈಸೂರು ಜಿಲ್ಲೆ ವಿಚಾರ, ಕೊರೋನಾ ಹಿಮ್ಮೆಟ್ಟಿಸುವ ವಿಚಾರದ ಬಗ್ಗೆ ಚರ್ಚೆ ಮಾಡಿದ್ವಿ. ಎಲ್ಲರಿಗೂ ಸಚಿವ ಸ್ಥಾನ ಸಿಗುತ್ತೆ, ನನಗೂ ಸಿಗುತ್ತೆ, ಎಂಟಿಬಿಗೂ ಸಿಗುತ್ತೆ, ಮುನಿರತ್ನಗೂ ಸಿಗುತ್ತೆ, ಶಂಕರ್ ಗೂ ಸಿಗುತ್ತೆ. ವಿಧಾನ ಪರಿಷತ್ ಸ್ಥಾನ ಕೊಡ್ತಿವಿ ಎಂದು ಮಾತು ಕೊಟ್ಟಿದ್ದಾರೆ. ಆ ಮಾತಿನಂತೆ ನಡೆಯುತ್ತಾರೆ. ಎಲ್ಲರಿಗೂ ಸಿಗುತ್ತೆ. ಆದರೆ ಸಮಯ ಕಾಯಬೇಕಷ್ಟೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿಶ್ವನಾಥ, ರಾಜ್ಯದಲ್ಲಿ ಯಾರಾದರೂ ನಾಲಿಗೆ ಮೇಲೆ ನಡೆಯುತ್ತಾರೆ ಎಂದರೆ ಅದು ಯಡಿಯೂರಪ್ಪ ಮಾತ್ರ. ಅವರು ಹಾಗೆ ನಡೆದುಕೊಂಡು ಬಂದಿದ್ದಾರೆ. ಹಾಗಾಗಿ ಎಲ್ಲರ ವಿಚಾರದಲ್ಲೂ ಅದು ಮುಂದುವರೆಯುತ್ತೆ. ಯಡಿಯೂರಪ್ಪ ನವರ ಮೇಲೆ ನಾವು ನಂಬಿಕೆ ಇಟ್ಟಿದ್ದೇವೆ ಎಂದರು.


Spread the love

Leave a Reply

Your email address will not be published. Required fields are marked *