ಪರಿಸರ ರಕ್ಷಣೆಯೇ ಮನುಜನ ರಕ್ಷಣೆ: ಬಿಇಓ ಅಶೋಕಕುಮಾರ ಸಿಂದಗಿ
1 min readಹುಬ್ಬಳ್ಳಿ: ಪರಿಸರವನ್ನ ರಕ್ಷಣೆ ಮಾಡಿದರೇ ಮನುಜನ ರಕ್ಷಣೆ ಮಾಡಿದ ಹಾಗೇ. ಇದೇ ಕಾರಣಕ್ಕೆ ನಾವೂ ಪರಿಸರವನ್ನ ಬೆಳೆಸುವ ಮೂಲಕ ಮಾನವ ಕುಲಕ್ಕೆ ಅನುಕೂಲ ಮಾಡಿಕೊಡಬೇಕೆಂದು ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕಕುಮಾರ ಸಿಂದಗಿ ಹೇಳಿದರು.
ಬಿ ಆರ್ ಸಿ ಉಣಕಲ್ಲದಲ್ಲಿ ಆಯೋಜನೆಗೊಂಡ ವಿಶ್ವ ಪರಿಸರ ದಿನಾಚರಣೆಯಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದ ಬಿಇಓ ಮಾತನಾಡಿದರು.
ಶಿಕ್ಷಣ ಇಲಾಖೆಯ ಎಲ್ಲರೂ ಪರಿಸರವನ್ನ ಬೆಳೆಸುವ ಸಂಕಲ್ಪ ತೊಡಬೇಕೆಂದು ಕರೆ ನೀಡಿದರು. ಬಿ ಆರ್ ಪಿ ಎಂ.ಎಸ್.ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುತಗಟ್ಟಿಯಲ್ಲೂ ಪರಿಸರ ದಿನಾಚರಣೆ
ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಶಾಲೆಯ ಮೈದಾನದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮ ನಡೆಸಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯ ಎಂ.ಬಿ.ತಹಶೀಲ್ದಾರ, ಸಿದ್ಧಪ್ಪ ಕುಂಬಾರ ಸೇರಿದಂತೆ ಹಲವರು ಉಪಸ್ಥಿರಿದ್ದರು.