ಮದುವೆ ಕಾರ್ಡ ಕೊಡಲು ಹೋದ ಮಧುಮಗ ಸಾವು: ದೋಣಿ ಮಗುಚಿ ದುರಂತ
1 min readಬಳ್ಳಾರಿ: ಮದುವೆ ಕಾರ್ಡ್ ಕೊಡಲು ಹೊರಟಿದ್ದ ಮದುಮಗ ತುಂಗಭದ್ರಾ ನದಿಯಲ್ಲಿ ದೋಣಿ ಮುಗುಚಿ ದುರ್ಮರಣಕ್ಕೀಡಾದ ಘಟನೆ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿಯ ಸೀಗನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. 26ವಯಸ್ಸಿನ ಮಧುಮಗ ಫಕ್ರುದ್ಧೀನ ತನ್ನ ಗೆಳೆಯ ಹೊನ್ನೂರಸಾಬನೊಂದಿಗೆ ಮದುವೆ ಕಾರ್ಡ್ ಕೊಡಲು ಹೊರಟಿದ್ದ. ಸೀಗನಹಳ್ಳಿಯಿಂದ ಕೊಪ್ಪಳದವರೆಗೆ ತೆಪ್ಪದಲ್ಲಿ ಹೊರಟಾಗ ಈ ಘಟನೆ ಸಂಭವಿಸಿದೆ. ತೆಪ್ಪದಲ್ಲಿ ಬೈಕ್ ತೆಗೆದುಕೊಂಡು ಹೋಗಿದ್ದೇ ದುರ್ಘಟನೆಗೆ ಕಾರಣವೆನ್ನಲಾಗಿದೆ. ತೆಪ್ಪದಲ್ಲಿ ಬಾರ ಹೆಚ್ಚಾದ ಪರಿಣಾಮ ನದಿಯಲ್ಲಿ ತೆಪ್ಪ ಮಗುಚಿ ಬಿದ್ದಿದೆ.
ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.