Posts Slider

Karnataka Voice

Latest Kannada News

ಬ್ಯಾಂಕ್ ಗೆ ವಂಚನೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್: ಸಿಕ್ಕವರಿಂದ 45ಲಕ್ಷ ವಂಚನೆ ಮಾಹಿತಿ

Spread the love

ಕಲಬುರಗಿ: ಜಿಲ್ಲೆಯಲ್ಲಿ ಮಹಾವಂಚಕ ಪಡೆಯೊಂದು ಕೆಲಸ ಮಾಡುತ್ತಿದ್ದ ನಕಲಿ ಡಾಕ್ಯೂಮೆಂಟ್ ಸೃಷ್ಟಿಸಿ ಬ್ಯಾಂಕುಗಳಿಗೆ ವಂಚಿಸುತ್ತಿದ್ದ ತಂಡವನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೆಚ್ಚು ಗ್ರಾಹಕರನ್ನ ಹೊಂದಿರದ ಬ್ಯಾಂಕ್ ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ವಂಚಕರು, ಕಾರ್ ಖರೀದಿಗಾಗಿ ಡಾಕ್ಯೂಮೆಂಟ್ ನಕಲಿ ಸೃಷ್ಟಿಸಿ ಬ್ಯಾಂಕ್ ಗಳಿಗೆ ಮೋಸ ಮಾಡುತ್ತಿದ್ದರು. ಕಾರ್ ಖರೀದಿಸುವುದಾಗಿ ಕಲಬುರಗಿಯ ಕೃಷ್ಣ ಗ್ರಾಮೀಣ ಬ್ಯಾಂಕ್ ನಲ್ಲಿ 45 ಲಕ್ಷ ವಂಚನೆ ಮಾಡಿರುವುದು ಇದೀಗ ಪತ್ತೆಯಾಗಿದೆ. ಇದೇ ತಂಡ ಇನ್ನೂ ಅನೇಕ ಬ್ಯಾಂಕ್ ಗಳಿಗೆ ವಂಚನೆ ಮಾಡಿರುವ ಶಂಕೆಯಿದೆ.

ಪೊಲೀಸರಿಂದ ಬಂಧಿತ ಆರೋಪಿ ಬಸವಂತರಾಯ ಪಾಟೀಲ್, ಚಿತ್ತಾಪೂರ ತಾಲೂಕಿನ ನಿವಾಸಿಯಾಗಿದ್ದಾನೆ. ಆತನಿಂದ ಒಂದು ಮಹೇಂದ್ರ ಕಾರ್ ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಮೂವರು ತಲೆಮರೆಸಿಕೊಂಡಿದ್ದು, ಸೈಬರ್ ಕ್ರೈಂ ಠಾಣೆ ಪೊಲೀಸರು ತನಿಖೆಯನ್ನ ಕೈಗೊಂಡಿದ್ದಾರೆ.


Spread the love

Leave a Reply

Your email address will not be published. Required fields are marked *