ಕಳ್ಳನಿಗೆ ಕೊರೋನಾ: ಬಚ್ಚಿಟ್ಟು ತನಿಖೆ ಮಾಡಿದವರಿಗೂ ಕೊರೋನಾ ಭೀತಿ
1 min readಹುಬ್ಬಳ್ಳಿ: ಹಾರ್ಡವೇರ್ ವಸ್ತುಗಳನ್ನ ಕದ್ದು ಮಾರಾಟ ಮಾಡುತ್ತಿದ್ದ ಮಾಜಿ ಮೇಸ್ತ್ರೀಯನ್ನ ಬಂಧನ ಮಾಡಿದ್ದ ಉಪನಗರ ಠಾಣೆ ಪೊಲೀಸರು ಇದೀಗ ಕೊರೋನಾದ ಭಯದಲ್ಲಿ ಬೀಳುವಂತಾಗಿದೆ.
ಕೆಲವು ದಿನಗಳ ಹಿಂದಷ್ಟೇ ಉಪನಗರ ಠಾಣೆ ಪೊಲೀಸರು ವಾರ್ಡವೇರ್ ಕಳ್ಳನನ್ನ ಹಿಡಿದು ಆತನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನ ವಶಪಡಿಸಿಕೊಂಡಿದ್ದರು.
ಅದಕ್ಕಿಂತ ಪೂರ್ವದಲ್ಲಿ ಕಳ್ಳನನ್ನ ಹತ್ತು-ಹನ್ನೆರಡು ದಿನಗಳವರೆಗೆ ಲಾಡ್ಜನಲ್ಲಿಟ್ಟು ತನಿಖೆ ಮಾಡಿ, ರಿಕವರಿ ಮಾಡಿದ್ದರು. ಅದಾದ ನಂತರ ಠಾಣೆಯ ಇನ್ಸ್ ಪೆಕ್ಟರ್, ಡಿಸಿಪಿ ಸಮೇತ ಹತ್ತು ಹದಿನೈದು ದಿನಗಳವರೆಗೆ ಕಳ್ಳನ ಜೊತೆಗಿದ್ದ ಪೇದೆಗಳು ಪೋಟೋಗೆ ಪೋಸು ಕೊಟ್ಟಿದ್ದರು.
ಅದಾದ ನಂತರ ನ್ಯಾಯಾಲಯಕ್ಕೆ ಒಪ್ಪಿಸುವ ಮುನ್ನ ಕೋವಿಡ್-19 ಟೆಸ್ಟ್ ಮಾಡಿಸಲಾಗಿದ್ದು, ಇದೀಗ ಆತನಿಗೆ ಕೊರೋನಾ ಪಾಸಿಟಿವ್ ಬಂದಿದೆ. ಹೀಗಾಗಿ ಕಳ್ಳನ ರಿಕವರಿ ಮಾಡಲು ಹೋದವರೀಗ ಬಾಯಿ-ಬಾಯಿ ಬಡಿದುಕೊಳ್ಳುವಂತಾಗಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಉಪನಗರ ಠಾಣೆಯನ್ನ ವರಾಂಡಕ್ಕೆ ಸ್ಥಳಾಂತರ ಮಾಡಲಾಗಿದೆ. ಠಾಣೆಯಲ್ಲಿ ಸ್ಯಾನಿಟೈಸರ್ ಮಾಡಲಾಗಿದ್ದು, ಮುಂದಿನ ಕ್ರಮಗಳನ್ನ ಪೊಲೀಸ್ ಆಯುಕ್ತರು, ಆರೋಗ್ಯ ಇಲಾಖೆಯ ಸೂಚನೆಯನ್ನ ಪಾಲಿಸುತ್ತಿದ್ದಾರೆ.